ಭಾನುವಾರ, ಜುಲೈ 8, 2012

ಮೂಡಲ ದಿಕ್ಕಿನಿಂದ ಬಡಗಲ ದಿಕ್ಕಿಗೆ ತಿರುಗಿದ ಹನುಮಂತ, ಸನಿಹದಲ್ಲೇ ಇದ್ದಾನೆ ಜ್ಯೋತಿರ್ ಮಹೇಶ್ವರ !!!!!


ಮೂಡಲ ಬಾಗಿಲ ಆಂಜನೇಯ ಸ್ವಾಮೀ ದೇವಾಲಯ.

ಇತಿಹಾಸವೇ ಹಾಗೆ ವಿಚಿತ್ರ ತಿರುವಿನ ಘಟನೆಗಳ ಸರಮಾಲೆ, ಅಲ್ಲಿ ನಮ್ಮ ತರ್ಕ ,ಕುತರ್ಕ, ಇವುಗಳಿಗೆ ಅವಕಾಶವಿಲ್ಲ.ನಾವಿಂದು ಸ್ವಾತಂತ್ರ್ಯದ ಸಮಾಜದಲ್ಲಿ ಅಂದು ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂದು ಏನೇ ಪ್ರಲಾಪಿಸಿದರೂ ಆಗಿಹೋಗಿರುವ ಐತಿಹಾಸಿಕ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲಾ.ಇತಿಹಾಸವನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ನಾವು ಅಂದಿನವರಾಗಿ ಇದ್ದು ಅರ್ಥ ಮಾಡಿಕೊಳ್ಳ ಬೇಕು , ಆದರೆ ನಾವು ನಮ್ಮ ಮೂಗಿನ ನೇರಕ್ಕೆ ಅದನ್ನು ವಿಶ್ಲೇಷಣೆ ಮಾಡಿ ಇತಿಹಾಸವನ್ನು ಗೊಂದಲದ ಗೂಡಾಗಿಸಿ ಘಟನೆಗಳನ್ನು ಮರೆ ಮಾಚುತ್ತಿದ್ದೇವೆ.ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಎರಡು ಹಳೆ ದೇವಾಲಯಗಳನ್ನು ಪರಿಚಯ ಮಾಡಿಕೊಡುತ್ತೇನೆ.
ಮೂಡಲದಿಂದ ಬದಗಳಿಗೆ ತಿರುಗಿದ ಹನುಮ

ಜುಮ್ಮಾ ಮಸೀದಿ ಹತ್ತಿರದಲ್ಲಿ ಹಾದು ಹೋಗುವ ಪೇಟೆ ಬೀದಿಯಲ್ಲಿ ಊರಕದೆಗೆ ತೆರಳುವಾಗ ನಿಮಗೆ  ಬೀದಿಯ ಎಡ ಭಾಗಕ್ಕೆ ಮೂಡಲ ಬಾಗಿಲ ಆಂಜನೇಯ ದೇಗುಲ ಸಿಗುತ್ತದೆ. ಈ ದೇವಾಲಯವು ಮೊದಲು ಶ್ರೀ ರಂಗಪಟ್ಟಣ  ಕೋಟೆಯ  ಪೂರ್ವದ ಬಾಗಿಲಿಗೆ ಅಭಿಮುಖವಾಗಿ  ಇತ್ತೆಂದೂ ನಂತರ ಇದನ್ನು ಸ್ಥಳಾಂತರಿಸಿ ಇಲ್ಲಿ ಉತ್ತರಾಭಿಮುಖವಾಗಿ  ಪ್ರತಿಷ್ಟಾಪಿಸಲಾಯಿತೆಂದು ಹೇಳುತ್ತಾರೆ.ಹಲವು ಕಾರಣಗಳಿಂದ ಮಹಾ ಬಲವಂತ ನಾದ ಹನುಮನು  ಇಲ್ಲಿ ಮೂಡಲ ದಿಕ್ಕಿಗೆ   ಬದಲು ಬಡಗಲ ದಿಕ್ಕಿಗೆ  ಮುಖ ಮಾಡಿ ಇತಿಹಾಸವನ್ನು ಮೆಲುಕು ಹಾಕುತ್ತಾ ನಿಂತಿದ್ದಾನೆ , ಇಲ್ಲಿ ತನ್ನ ಸೌಹಾರ್ಧತೆಯನ್ನು ಮೆರೆದಿದ್ದಾನೆ.ದೇವಾಲಯದ ಒಳಗೆ ಸುಂದರ  ಹನುಮ ಮೂರ್ತಿ ಇದ್ದು ಪ್ರವಾಸಿಗಳು ಇದನ್ನು ದರ್ಶನ ಮಾಡಲು ಉತ್ತಮವಾಗಿದೆ.

ಗುರುವಾರ, ಜೂನ್ 14, 2012

ಶ್ರೀ ರಂಗಪಟ್ಟಣ ಯುದ್ದ ಗೆದ್ದ ಸೈನಿಕ ಅಧಿಕಾರಿಗಳಿಗೆ ಮೆಡಲ್ ಕೊಟ್ರಂತೆ.!!

ಚಿತ್ರ ಕೃಪೆ  ಅಂತರ್ಜಾಲ


ಇತಿಹಾಸ ಕೆದಕಿದಷ್ಟೂ ನಾವರಿಯದ ಮಾಹಿತಿ ಎದ್ದುಬರುತ್ತದೆ. ಹುಡುಕಿದಷ್ಟೂ ನಿಘೂಡ ವಿಚಾರಗಳು ತಿಳಿದುಬರುತ್ತದೆ. ಅಂತಹ ಒಂದು ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರು ಭಾರತದಲ್ಲಿ ಹಲವಾರು ಸಾಮ್ರಾಜ್ಯಗಳನ್ನು ಗೆದ್ದಿದ್ದು ಎಲ್ಲರಿಗೂ ತಿಳಿದ ವಿಚಾರ ಆದರೆ ಗೆದ್ದ ಯಾವುದೇ ಸಾಮ್ರಾಜ್ಯದ ಹೆಸರಿನಲ್ಲಿ ಯುದ್ದ ಗೆದ್ದ ನೆನಪಿಗೆ ಆ ಸಾಮ್ರಾಜ್ಯದ ಹೆಸರಿನಲ್ಲಿ ಮೆಡಲ್ ನೀಡಿದ ಉದಾಹರಣೆ ಬಹಳ ಕಡಿಮೆ. ಆದರೆ "ಶ್ರೀ ರಂಗಪಟ್ಟಣ" ಅಥವಾ "ಸೇರಿಂಗ ಪಟ್ಟಂ" ವಿಚಾರದಲ್ಲಿ ಬ್ರಿಟೀಷರು ಅಚ್ಚರಿ ಮೂಡಿಸಿದ್ದಾರೆ. ಹೌದು 1799  ರ ಮೇ   4 ರಂದು ಶ್ರೀ ರಂಗ ಪಟ್ಟಣದ  ಪ್ರವೇಶ ಪಡೆದ ಬ್ರಿಟೀಷರು ಅಂತಿಮ ಯುದ್ದ ವನ್ನು ಗೆದ್ದರು . ಅವರ ಶಕ್ತಿ ಹಾಗು ಯುಕ್ತಿಗೆ ಸವಾಲಾಗಿ ನಿಂತಿದ್ದ , ಹಾಗು ಅವರ ಯುದ್ದ ತಂತ್ರಕ್ಕೆ ಸವಾಲಾಗಿ ನಿಂತಿದ್ದ ಒಂದು ಸಣ್ಣ ದ್ವೀಪದ ಮೇಲಿನ ಯುದ್ದ  ಅವರಿಗೆ  ಗೆಲುವಿನ ಗರಿ ಮೂಡಿಸಿತ್ತು. ಯುದ್ದದ ವಿಚಾರದಲ್ಲಿ ಅತ್ಯಂತ ಹೆದರಿಕೆ, ಗೌರವ ಮೂಡಿಸಿದ್ದ ಈ "ಶ್ರೀ ರಂಗ ಪಟ್ಟಣ ಅಥವಾ ಸೇರಿಂಗ ಪಟ್ಟಂ " ಯುದ್ದ ಗೆದ್ದ ನೆನಪಿಗಾಗಿ  ಯುದ್ಧ ದಲ್ಲಿ ಪಾಲ್ಗೊಂಡಿದ್ದ ತನ್ನ ಅಧಿಕಾರಿಗಳು, ಸೈನಿಕರಿಗೆ   1801 ರಲ್ಲಿ   ಸನ್ಮಾನ ಮಾಡಿ ಸುಮಾರು 50000 ಕ್ಕೂ ಹೆಚ್ಚು    "ಸೇರಿಂಗ ಪಟ್ಟಂ ಮೆಡಲ್ " ನೀಡಿ ಗೌರವಿಸಿದೆ.http://en.wikipedia.org/wiki/Seringapatam_medal ಲಿಂಕ್ ನಲ್ಲಿ ಈ ಬಗ್ಗೆ ಮಾಹಿತಿ ಇದೆ ನೋಡಿ.ವಿಕಿ ಪೀಡಿಯಾ ಮಾಹಿತಿಯಂತೆ 350 ಚಿನ್ನ,1035 ಬೆಳ್ಳಿ, 5000 ಕಂಚು ಹಾಗು 45000  ಟಿನ್  ಮೆಡಲ್ಗಳನ್ನು ನೀಡಿರುವುದಾಗಿ ತಿಳಿಸಲಾಗಿದೆ. ಚಿತ್ರ ಕೃಪೆ http://www.fitzmuseum.cam.ac.uk/coins/collection/watson/page327.html ಹಾಗು ವಿಕಿಪೀಡಿಯ

ಶುಕ್ರವಾರ, ಜೂನ್ 1, 2012

ಬ್ರಿಟೀಷರು ತಯಾರಿಸಿದ್ದ ಸೆರಿಂಗಪಟಂ ಹೆಸರಿನ ಒಂದು ಯುದ್ದ ನೌಕೆ

ಸೆರಿಂಗ ಪಟಂ ನೌಕೆ

ಇತಿಹಾಸದ ವಿಶೇಷವೇ ಹಾಗೆ ಯಾವುದೋ ಮಾಹಿತಿ ಎಲ್ಲೋ ಅಡಗಿ ಕುಳಿತಿರುತ್ತದೆ.ಯಾವ ಊರಿನ  ಬಗೆಗಿನ ಐತಿಹಾಸಿಕ ಘಟನೆ ಇನ್ಯಾವ ಊರಿನಲ್ಲೋ  ನಡೆದಿರುತ್ತದೆ. ಅಂತಹ ಒಂದು ಆಸಕ್ತಿದಾಯಕ ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರಿಗೆ "ಸೆರಿಂಗ ಪಟಂ " ಅಥವಾ" ಶ್ರೀ ರಂಗ ಪಟ್ಟಣ " ಎಂಬ ಊರಿನ ಬಗ್ಗೆ ಅದೇನು ಸೆಳೆತವೋ ಕಾಣೆ ಬಹುಷಃ ಆ ಕಾಲದಲ್ಲಿ ಈ ಊರಿನ ಹೆಸರಿನಲ್ಲಿ ಹಲವಾರು ಆಸಕ್ತಿದಾಯಕ ಐತಿಹಾಸಿಕ  ಕಾರ್ಯಗಳನ್ನು ಮಾಡಿದ್ದಾರೆ. ಅಂತಹ ಒಂದು ಘಟನೆ ಇಲ್ಲಿದೆ.ಎಲ್ಲರಿಗೂ ತಿಳಿದಂತೆ ಶ್ರೀ ರಂಗ ಪಟ್ಟಣದ  ಮೇಲೆ ಬ್ರಿಟೀಷರು 4 ಮೇ 1799 ರಲ್ಲಿ ವಿಜಯ ಸಾಧಿಸಿದರು. ಆ ನಂತರ "ಬ್ರಿಟೀಶ್ ರಾಯಲ್ ನ್ಯಾವಿ " ವತಿಯಿಂದ" ಸೆರಿಂಗ ಪಟಂ "  ಹೆಸರಿನ ಒಂದು ಯುದ್ದ ನೌಕೆ ತಯಾರಿಸಲು ಉದ್ದೇಶಿಸಿ , "ಬಾಂಬೆ ಡಾಕ್ ಯಾರ್ಡ್" ನಲ್ಲಿ  ಈಸ್ಟ್ ಇಂಡಿಯಾ ಕಂಪನಿಗೆ  ನೌಕೆ ತಯಾರಿಸಲು  ದಿನಾಂಕ  21 -08 -1813 ರಲ್ಲಿ  ಸೂಚಿಸಲಾಯಿತು.ಅದರಂತೆ ಈಸ್ಟ್ ಇಂಡಿಯಾ ಕಂಪನಿ ದಿನಾಂಕ 5 ಸೆಪ್ಟೆಂಬರ್  1819  ರಿಂದ 10 ಏಪ್ರಿಲ್  1821 ರವರೆಗೆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ "ಸೆರಿಂಗ ಪಟಂ " ಹೆಸರಿನ ಯುದ್ಧ ನೌಕೆಯನ್ನು ತಯಾರಿಸಿ  "ಬ್ರಿಟೀಶ್ ರಾಯಲ್ ನ್ಯಾವಿ " ವಶಕ್ಕೆ ನೀಡಲಾಯಿತು. ನಂತರ ಈ ನೌಕೆ ಹಲವಾರು ಐತಿಹಾಸಿಕ ಸೇವೆ ಸಲ್ಲಿಸಿ "ಸೆರಿಂಗ ಪಟಂ " ಅಥವಾ "ಶ್ರೀ ರಂಗ ಪಟ್ಟಣ" ಹೆಸರನ್ನು ಪ್ರಸಿದ್ದ ಗೊಳಿಸಿದೆ. ಉತ್ತಮ ಸೇವೆಸಲ್ಲಿಸಿದ ಈ ನೌಕೆಯನ್ನು ಆಫ್ರಿಕಾ ಖಂಡದ "ಕೇಪ್ ಆಫ್ ಗುಡ್ ಹೋಪ್" ನಲ್ಲಿ    1873  ರ ವರ್ಷದಲ್ಲಿ   ಒಡೆದು ಹಾಕಲಾಯಿತು . ಈ ನೌಕೆ ಸಾಗರದಲ್ಲಿ  ಪ್ರ ಪ್ರಥಮ ವಾಗಿ  ಅಂಚೆ ಸಾಗಿಸಿ ದಾಖಲೆ ಮಾಡಿದ ನೆನಪಿನಲ್ಲಿ ಒಂದು ಅಂಚೆ ಚೀಟಿಯನ್ನು ಈ ನೌಕೆಯ ಸ್ಮರಣಾರ್ಥ ಹೊರಡಿಸಲಾಗಿದೆ.

ಭಾರತ ದೇಶದ ಒಂದು ಊರಿನ  ಹೆಸರನ್ನು ಇತಿಹಾಸದಲ್ಲಿ ಬೆಳಗಿಸಿದ ಆ ನೌಕೆಗೆ  ನಾವೆಲ್ಲಾ ಸಲಾಂ ಹೇಳೋಣ ಅಲ್ವೇ.{ ಈ ಲೇಖನದ ಸಂಪೂರ್ಣ  ಮಾಹಿತಿಯನ್ನು     http://en.wikipedia.org/wiki/Seringapatam_class_frigate  ಹಾಗೂ   http://www.shipstamps.co.uk/forum/viewtopic.php?f=2&t=8131#!lightbox/0/    ಅಂತರ್ ಜಾಲ ತಾಣ ಗಳಿಂದ ಕೃತಜ್ಞತಾ ಪೂರ್ವಕವಾಗಿ ಪಡೆಯಲಾಗಿದೆ.}

ಶನಿವಾರ, ಫೆಬ್ರವರಿ 18, 2012

ಆಸ್ಟ್ರೇಲಿಯಾ ಖಂಡದ ಸಮೀಪ ಶ್ರೀರಂಗಪಟ್ಟಣ[seringapattam ] ದ್ವೀಪ !!!

ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ seringapattam ದ್ವೀಪ [ಕನ್ನಡಿಗರ ಹೆಮ್ಮೆ]
ಈ ಕನ್ನಡ ನಾಡಿನ ಕೀರ್ತಿಪತಾಕೆ ಹಿಂದೂ ಮಹಾ ಸಾಗರದಲ್ಲಿ ನೆಲೆಸಿರುವುದು ಹೀಗೆ.
ನಮಸ್ಕಾರ ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಒಂದು ಆಶ್ಚರ್ಯಕರ ವಿಚಾರ ತಿಳಿಸಿಕೊಡುತ್ತೇನೆ. ನಮಗೆಲ್ಲಾ ಗೊತ್ತು ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಸಣ್ಣ ತಾಲೂಕು ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಅಂತ.ಈ ಊರನ್ನು ಹಿಂದೆ ಆಂಗ್ಲರು serigapattam ಅಂತಾನು ಕರೀತಿದ್ರು.ಈಗ ನೋಡಿ ಆಸ್ಟ್ರೇಲಿಯ ದೇಶದ ಪಶ್ಚಿಮ ದಿಕ್ಕಿಗೆ ಸಮೀಪ ಒಂದು ಕೊರಾಲ್ ದ್ವೀಪಕ್ಕೆ seringapattam ಅಂತಾ ಹೆಸರಿಟ್ಟು ಕನ್ನಡ ನಾಡಿನ ಈ ಊರಿನ ಹೆಸರು ಮೆರೆಯುವಂತೆ ಮಾಡಲಾಗಿದೆ. ಅಂತರ್ಜಾಲ ಜಾಲಾಡಿದಾಗ ಈ ಹಿಂದೆ ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ಮೈಸೂರಿನ ಅಂತಿಮ ಯುದ್ದ [೧೭೯೯] ದಲ್ಲಿ ಭಾಗವಹಿಸಿ ನಂತರ ಆಸ್ತ್ರೆಲಿಯಗೆ ತೆರಳಿದ ಸ್ಕಾಟ್ ಕುಟುಂಬ ಒಂದು ಈ ದ್ವೀಪವನ್ನು ಖರೀದಿಸಿಶ್ರೀ ರಂಗ ಪಟ್ಟಣದಲ್ಲಿ ನಡೆದ ಅಂತಿಮ ಕಾಳಗದ ನೆನಪಾಗಿ ಆ ದ್ವೀಪಕ್ಕೆ seringapattam ಅಂತಾ ಹೆಸರನ್ನು ನಾಮಕರಣ ಮಾಡಿ,ಸಂಭ್ರಮಿಸಿದೆ.ಬಹುಷಃ ಈ ದೇಶದ ಯಾವುದೇ ಊರಿನ /ಪಟ್ಟಣದ ಬಗ್ಗೆ ಇಂಥಹ ಘಟನೆ ಇರುವುದಿಲ್ಲ .ಬನ್ನಿ ಇದರ ಬಗ್ಗೆ ಕೆಲವು ಚಿತ್ರಗಳನ್ನು ಅಂತರ್ಜಾಲ ಕೃಪೆ ಇಂದ ನಿಮಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿದ್ದೇನೆ ನೋಡಿಬಿಡೋಣ ಬನ್ನಿ
ಉಪಗ್ರಹ ಚಿತ್ರ ದಲ್ಲಿ ಸೇರಿಂಗ ಪಟ್ಟಂ [ಶ್ರೀ ರಂಗ ಪಟ್ಟಣ ]ದ್ವೀಪ ಕಾಣುವುದು ಹೀಗೆ!!

ದ್ವೀಪದ ಮತ್ತೊಂದು ಸುಂದರ ನೋಟ .
Scott and Seringapatam Reefs is a group of atoll-like reefs in the Timor Sea more than 300 km northwest of Cape Leveque, Western Australia, on the edge of the continental shelf. There are three or four separate reef structures, depending on whether Scott Reef Central is counted separately. The group is just one of a number of reef formations off the northwest coast of Australia and belongs to Western Australia. Further to the northeast are Ashmore and Cartier Islands, and to the southwest are the Rowley Shoals......................................................

Each of the three reefs rises steeply from the seabed 400 to 500 m below. Much of the reaf area dries at low tide, but besides Sandy Islet of Scott Reef South, there are only a few rocks and sandbanks above the high water mark.
  • Scott Reef South (also Horseshoe Reef or South Reef) is a large crescent-shaped formation that has a rare and unusual double reef crest. Its lagoon, has depths of over 24 m throughout the greater portion. The reef with its lagoon covers an area of 144 km².
  • Scott Reef Central, because of its proximity occasionally subsumed within Scott Reef South, lies off West Hook (the western extremity of the crescent of Scott Reef South), with Sandy Islet at 14°03′S 121°46′E / 14.05°S 121.767°E (690 meters north-south, up to 110 meters wide, with an area of 0.05 km²). This reef falls dry to the extent of 0.8 to 1.6 km from the islet. There is a conspicuous tower on the islet and also a boulder with a height 2.4 m near its northern end. A detached reef, which dries 0.6 m, lies 2.4 km northeast of Sandy Islet. The passage between Scott Reef South and Scott Reef Central is only 33 m deep, much less than the passages between the other reefs (366 m between Scott Reef South and Scott Reef North).
  • Scott Reef North consists of a large, approximately circular-shaped, reef lying 23 km southwest of Seringapatam Reef. The reef is composed of a narrow reef-crest that is backed by broad reef flats — much of which becomes exposed at low tide — and a deep central lagoon that is connected to the open sea by two delta-like channels. The reef with its lagoon covers an area of 106 km².
  • Seringapatam Reef is located at 13°40′S 122°05′E / 13.667°S 122.083°E, 23 km north of Scott Reef North. This reef is named after the Battle of Seringapatam, the historical last and decisive battle fought between Tipu Sultan and the British Raj forces in Southern India. It is a small circular-shaped reef. Its narrow reef rim encloses a relatively deep lagoon. Much of the reef becomes exposed at low tide. There are large boulders around its edges, with a few sandbanks, which rise about 1.8 m above the water, on the west side. Seringapatam Reef covers an area of 55 km² (including the central lagoon). ನೀವು ಈ ತಾಣಕ್ಕೆ ಹೋಗಿ ಕನ್ನಡ ನಾಡಿನ ಹೆಮ್ಮೆಯ ದ್ವೀಪ ಒಂದರ ಹೆಸರನ್ನು ದೂರದ ಆಸ್ಟ್ರೇಲಿಯ ಸಮೀಪ ಇಡಲಾಗಿರುವ ಸೋಜಿಗವನ್ನು ಅನುಭವಿಸಿ.ಬನ್ನಿ ಹೇಳೋಣ ನಮ್ಮ ದೇಶದ ಇತಿಹಾಸಕ್ಕೆ ಜಯವಾಗಲಿ. ನೋಡಿದ್ರಾ ನಮ್ಮ ದೇಶದ ಇತಿಹಾಸ ಎಂಥಹ ವಿಶೇಷ ಹೊಂದಿದೆ.ಆಲ್ವಾ ನೀವೇನಂತೀರಾ!!![ ಲೇಖನದ ವಿವರಗಳನ್ನು ಅಂತರ್ಜಾಲದ ವಿಕಿಪೀಡಿಯ http://en.wikipedia.org/wiki/Scott_and_Seringapatam_Reefs ಹಾಗುಇನ್ನಿತರ ಹಲವಾರುತಾಣಗಳಿಂದ ಪಡೆಯಲಾಗಿದೆ]

ಭಾನುವಾರ, ಫೆಬ್ರವರಿ 12, 2012

ಶ್ರೀ ರಂಗ ಪಟ್ಟಣದಲ್ಲಿ ಫ್ರೆಂಚ್ ಕ್ರಾಂತಿಕಾರಿ ಜಾಕೊಬಿನ್ ಕ್ಲಬ್ ಇತ್ತಂತೆ ...........................! ಜಾಕೊಬಿನ್ ಕ್ಲಬ್ ಎಂದರೇನು ?


ಜಾಕೊಬಿನ್  ಕ್ಲಬ್  ಲಾಂಛನ [ಚಿತ್ರ ಕೃಪೆ ಅಂತರ್ಜಾಲ]
ಹೌದು ಇತಿಹಾಸ ಕೆದಕುತ್ತಾ ಹೋದಂತೆ ಮತ್ತಷ್ಟು ಹೊಸ ವಿಚಾರ  ಹೊರಬರುತ್ತದೆ. ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣ ಕ್ರಿಕೆಟ್ ಇತಿಹಾಸಕ್ಕೆ ತಳುಕು    ಹಾಕಿಕೊಂಡಿತ್ತು, ಈ ಸಂಚಿಕೆಯಲ್ಲಿ ಮತ್ತಷ್ಟು ಅಚ್ಚರಿಯಾಗಿ ಫ್ರಾನ್ಸ್  ಅಂತರ್ ರಾಷ್ಟ್ರೀಯ ಸಂಘಟನೆ "ಜಾಕೊಬಿನ್ ಕ್ಲಬ್ "  ಶಾಖೆ  ಅನ್ನು ಭಾರತ ಖಂಡದಲ್ಲಿ ಹೊಂದಿದ್ದ ಏಕೈಕ ತಾಣವಾಗಿ ಹೊಮ್ಮಿದೆ.ಬನ್ನಿ ಮೊದಲು ಫ್ರಾನ್ಸ್ ನ ಜಾಕೊಬಿನ್ ಕ್ಲಬ್ ಎಂದರೇನು ತಿಳಿಯೋಣ.
ಫ್ರಾನ್ಸ್ ದೇಶದ ಜಾಕೊಬಿನ್ ಕ್ಲಬ್ ನೋಟ[ಚಿತ್ರ ಕೃಪೆ ಅಂತರ್ಜಾಲ ]

1789  ರ  ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಸಮಯವಾಗಿತ್ತು , ಆ ಸಂದರ್ಭದಲ್ಲಿ ಒಂದು ಕ್ರಾಂತಿ ಕಾರಿ ದೋರಣೆ ಉಳ್ಳ  "ಜಾಕೊಬಿನ್ ಕ್ಲಬ್ "    ಅಸ್ತಿತ್ವಕ್ಕೆ ಬಂದಿತು , ಇದರ ಹಲವು ಕಾರ್ಯಕ್ರಮಗಳು ಅಂದಿನ ಫ್ರಾನ್ಸ್ ದೇಶ ದ ಜನರಿಗೆ ಇಷ್ಟವಾದ ಕಾರಣ ಬಹಳ ಬೇಗ ತನ್ನ ಶಾಖೆಗಳನ್ನು ಫ್ರಾನ್ಸ್ ದೇಶಾದ್ಯಂತ ವಿಸ್ತರಿಸಿಕೊಂಡು 1789  ರಿಂದ ಸುಮಾರು 1800 ರವರೆಗೂ ಫ್ರಾನ್ಸ್ ದೇಶದ ಕ್ರಾಂತಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿತು.ಅಂತಹ ಒಂದು ಸಂಸ್ಥೆಯ ಒಂದು ಶಾಖೆ  ಶ್ರೀ ರಂಗ ಪಟ್ಟಣದಲ್ಲಿ ಅಸ್ತಿತ್ವದಲ್ಲಿತ್ತು. ಇದರ ಆರಂಭದ ಮುಖ್ಯ ಅತಿಥಿ ಸ್ವತಹ "ಟಿಪ್ಪೂ ಸುಲ್ತಾನನೆ"   ಆಗಿದ್ದ  ಹಾಗು ತಾನೂ ಸಹ "ಜಾಕೊಬಿನ್ ಕ್ಲಬ್"  ನ ಸದಸ್ಯನಾಗಿ ಫ್ರಾನ್ಸ್ ದೇಶದ ಸ್ವಾತಂತ್ರ ಕ್ರಾಂತಿಗೆ ಬೆಂಬಲ ಘೋಷಿಸಿದ ಎಂದು ತಿಳಿದು ಬರುತ್ತದೆ.ಹಾಗೂ  1797 ರ ಮೇ 05  ರಂದು ಶ್ರೀ ರಂಗ ಪಟ್ಟಣದಲ್ಲಿ ಜಾಕೊಬಿನ್ ಕ್ಲಬ್ಬಿನ ಪದಾಧಿಕಾರಿಗಳ ಆಯ್ಕೆ ನಡೆದು 1797  ರ ಮೇ 14  ರಂದು  ಶ್ರೀ ರಂಗ ಪಟ್ಟಣದಲ್ಲಿ ಜಾಕೊಬಿನ್ ಕ್ಲಬ್ ಪ್ರಾರಂಭೋತ್ಸವಕ್ಕೆ  ನೂರಾರು ಖುಶಾಲು ತೋಪು, ಹಾಗು ರಾಕೆಟುಗಳನ್ನು ಹಾರಿಸಿ  ಸಂಭ್ರಮಿಸಲಾಯಿತೆಂದು  ಫ್ರಾನ್ಸ್ ಸ್ವಾತಂತ್ರ ಕ್ರಾಂತಿಯ ನೆನಪಿನಲ್ಲಿ  ಒಂದು ಗಿಡವನ್ನು ಟಿಪ್ಪೂ ಸುಲ್ತಾನನ ಕೈಲಿ ನೆಡಿಸಿ, ಫ್ರಾನ್ಸ್ ದೇಶದ  ಸ್ವಾತಂತ್ರ ದ್ವಜಾ ರೋಹಣ   ಮಾಡಲಾಯಿತೆಂದು  ತಿಳಿದು ಬರುತ್ತದೆ.   ಜಾಕೊಬಿನ್ ಕ್ಲಬ್ ಗಳ ಬಗ್ಗೆ ಅಂದಿನ ದಿನದಲ್ಲಿ ಭಾರತದ ಯಾವ ಮೂಲೆಯಲ್ಲೂ ಅಸ್ತಿತ್ವದ ಬಗ್ಗೆ ಇಂತಹ ಮಾಹಿತಿ ಸಿಗಲಾರದು .ಇದೂ ಸಹ ಈ  ಪುಟ್ಟ ಊರಿನ  ಅಂತರ್ರಾಷ್ಟ್ರೀಯ ಖ್ಯಾತಿ  ನಿರೂಪಿಸುತ್ತದೆ.   ನಂಬಿಕೆ ಬರಲಿಲ್ಲ ವೆ ಇಲ್ಲಿದೆ ನೋಡಿ ಆಧಾರ ಅಂತರ್ಜಾಲ   ಲಿಂಕ್ ಗಳ ಮಾಹಿತಿ ಇಲ್ಲಿದೆ ನೋಡಿ.   {ದುರಂತ ವೆಂದರೆ ಶ್ರೀ ರಂಗ ಪಟ್ಟಣದ ಜಾಕೊಬಿನ್ ಕ್ಲಬ್ ನ ಬಗ್ಗೆ  ಹೆಚ್ಚಿನ ಮಾಹಿತಿ ಬ್ರಿಟನ್ ಹಾಗು ಫ್ರಾನ್ಸ್ ನಲ್ಲಿ ಇರುವುದು}.
ಜಾಕೊಬಿನ್ ಕ್ಲಬ್ ನ ಇನ್ನೊಂದು ನೋಟ[ಚಿತ್ರ ಕೃಪೆ ಅಂತರ್ಜಾಲ ]
       
1 ]http://en.wikipedia.org/wiki/Jacobin_Club      After the March on Versailles in October 1789, the club, still entirely composed of deputies, followed the National Constituent Assembly to Paris, where it rented the refectory of the monastery of the Jacobins in the Rue Saint-Honoré, adjacent to the seat of the Assembly. The name "Jacobins", given in France to the Dominicans (because their first house in Paris was in the Rue St Jacques), was first applied to the club in ridicule by its enemies. The title assumed by the club itself, after the promulgation of the constitution of 1791, was Société des amis de la constitution séants aux Jacobins à Paris, which was changed on 21 September 1792, after the fall of the monarchy, to Société des Jacobins, amis de la liberté et de l'égalité (Society of Jacobins, friends of liberty and equality). It occupied successively the refectory, the library, and the chapel of the monastery.
2} http://www.tigerandthistle.net/tipu332.htm        
          
fter the captivating scenes of the Hostage Princes in 1792, the jubilation which followed the successful Storming of Seringapatam was quickly exploited by artists and printmakers. Subscribers were sought, not only in Britain, but through agents in Madras, Calcutta and Bombay, and prints were dedicated to influential figures in the Mysore campaigns: Baird; Dundas; Richard Wellesley or His most gracious Majesty George III. The prints were often published in sets of four: The Assault and Taking of Seringapatam; 'The Last Effort and Fall of Tipu Sultan; The Body of Tipu Sultan recognised by his Family; The Surrender of the 'Two Sons of Tipu Sultan (to Major General Baird). For the popular market, engravings of the dying Tipu and the surrender of his sons were translated into glass paintings. Orme and Bartolozzi made engravings after Mather Brown's paintings; Grozer, Rogers, Laminet and Cardon after Singleton; Reynolds after Ker Porter, and Cardon and Schiavonetti after Allan. Nor was the market restricted to Great Britain. Schiavonetti's series after Singleton was published in London, but also sold by the Augsburg Akademy, with inscriptions in German and English. Other engravings have both English and French inscriptions.

Following the French links to India, and Seringapatam, there is evidence for the most remarkable demonstration of contemporary French political ideals. A French paper was found in Tipu's Palace in 1799, entitled 'Proceedings of a Jacobin Club formed at Seringapatam by the French Soldiers in the Corps commanded by M.Dompart. ' A Scotsman, Capt W Macleod, attested to its authenticity. The Paper listed by name 59 Frenchmen in the pay of 'Citizen Tippoo'; it described the gathering of a Primary Assembly on 5th May 1797, to elect a President, Francois Ripaud, and other officers. The 'Rights of Man' were proclaimed, and Ripaud presented a lecture on Republican principles. Further deliberations and formalities followed before, on 14th May, the National flag was ceremonially raised and a small delegation were formally received by Tipu. The 'Citizen Prince' ordered a salute of 2,300 cannon, all the musketry and 500 rockets, with a further 500 cannon firing from the Fort. A Tree of Liberty was planted, and crowned with a Cap of Equality, before Ripaud challenged his co-patriots: 'Do you swear hatred to all Kings, except Tippoo Sultaun, the Victorious, the Ally of the French Republic - War against all Tyrants, and love towards your Country and that of Citizen Tippoo.' 'Yes! We swear to live free or die,' they replied.

ಸೋಮವಾರ, ಫೆಬ್ರವರಿ 6, 2012

ಶ್ರೀ ರಂಗ ಪಟ್ಟಣ ಭಾರತ ಕ್ರಿಕೆಟ್ ಇತಿಹಾಸಕ್ಕೂ ತಳುಕು ಹಾಕಿಕೊಂಡಿದೆ.!!!!

ಇತಿಹಾಸ ಕಾಲದ  ಕ್ರಿಕೆಟ್ ಪಂಧ್ಯ  ೧೭೯೯ ರ ಆಸುಪಾಸು

ಇದೇನಿದು ಶ್ರೀ ರಂಗ ಪಟ್ಟಣ ಸ್ಮಾರಖ ಪರಿಚಯ ಮಾಡಿಕೊಡುತ್ತಿದ್ದ ಇವನು ಶ್ರೀ ರಂಗ ಪಟ್ಟಣ ಇತಿಹಾಸಕ್ಕೆ ಸಂಬಂದ ಪಡದ ಕ್ರಿಕೆಟ್ ಬಗ್ಗೆ ಬರೆಯಲು ಹೊರಟನಲ್ಲಾ ಅಂತಾ ಬೇಸರಿಸಬೇಡಿ, ಈ ಊರಿನ ಇತಿಹಾಸದ  ಅಂತರಾಳ  ವಿಚಿತ್ರ ಸ್ವಾಮೀ.ಹೌದು ಇಷ್ಟು ದಿನ ಇತಿಹಾಸದ  ಸ್ಮಾರಕ ಪರಿಚಯ ಮಾಡುತ್ತಿದ್ದ ನಾನು ಸ್ವಲ್ಪ ಬದಲಾವಣೆಗಾಗಿ ಈ ವಿಶೇಷ ಲೇಖನ ಬ್ಲಾಗ್ನಲ್ಲಿ  ಹಾಕುತ್ತಿದ್ದೇನೆ .ಕ್ರಿಕೆಟ್ ನಮಗೆಲ್ಲಾ ತಿಳಿದಂತೆ ಇಂದು ಭಾರತದ ಅನಧಿಕೃತ ರಾಷ್ಟ್ರೀಯ ಕ್ರೀಡೆಯಾಗಿ ಜನಪ್ರೀಯತೆ ಗಳಿಸಿದೆ.ಕ್ರಿಕೆಟ್ ಇಂದು ಭಾರತೀಯರ ಉಸಿರಾಗಿದೆ.ಆಟಗಾರರು ಇಂದು ಚಕ್ರವರ್ತಿಗಳಾಗಿದ್ದಾರೆ. ಆದರೆ ಈ ಕ್ರಿಕೆಟ್ಗೂ ನಮ್ಮ ದೇಶದಲ್ಲಿ ಒಂದು ಇತಿಹಾಸವಿದೆ . ಬ್ರಿಟೀಷ್ ಬಳುವಳಿಯಾದ ಈ ಕ್ರಿಕೆಟ್  ಮೊದಲು ಭಾರತಕ್ಕೆ  ಕಾಲಿಟ್ಟಿದ್ದು 1725  ರಲ್ಲಿ , ಬ್ರಿಟೀಷ್ ಮೂಲದ ಕೆಲವು ನಾವಿಕರು ಕ್ರಿಕೆಟ್ ಆಡಿದರೆಂದು ಕೆಲವು ದಾಖಲೆ ಹೇಳುತ್ತವೆ ಅಧಿಕೃತವಾಗಿ  ಈ ಭಾರತ ಖಂಡದ ಮೊದಲ ಕ್ರಿಕೆಟ್ ಕ್ಲಬ್  1792  ರಲ್ಲಿ ಕಲ್ಕತ್ತಾ ಕ್ರಿಕೆಟ್ ಹಾಗು ಫುಟ್ಬಾಲ್  ಸಂಸ್ಥೆ  ಎಂಬ ಹೆಸರಿನಿಂದ ಪ್ರಾರಂಭವಾಯಿತು . ಅದಾದನಂತರ  ದೇಶದ ಬಹಳಷ್ಟು ಕಡೆ ಬಾಂಬೆ, ದೆಹಲಿ, ಮದ್ರಾಸ್,ಸೇರಿದಂತೆ ಬ್ರಿಟೀಷ್ ಅದಿಪತ್ಯ  ಇದ್ದರೂ  ಎಲ್ಲೂ ಎರಡನೇ ಕ್ರಿಕೆಟ್ ಕ್ಲಬ್ ಪ್ರಾರಂಭವಾಗಲಿಲ್ಲ. ಆದರೆ ಶ್ರೀ ರಂಗ ಪಟ್ಟಣ ಅಂತಿಮ ಯುದ್ದ 1799 ರ ಮೇ  4 ರಂದು ಮುಗಿದ ನಂತರ ಬ್ರಿಟೀಷ್ ಅಧಿಕಾರಿಗಳು ಸೇರಿ ಭಾರತದ  ಎರಡನೇ ಕ್ರಿಕೆಟ್ ಕ್ಲಬ್ ಸ್ಥಾಪಿಸುತ್ತಾರೆ ಹಾಗಾಗಿ ಭಾರತ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಶ್ರೀ ರಂಗ ಪಟ್ಟಣವೂ  ವಿಶೇಷವಾಗಿ ತನ್ನ ಗೌರವ ಪಡೆದು ಮೆರೆದಿದೆ. ಮೇಲಿನ ಮಾಹಿತಿ ನಂಬಿಕೆ ಬರಲಿಲ್ಲವೇ .ಇಲ್ಲಿದೆ ನೋಡಿ ಪುರಾವೆ
ಇತಿಹಾಸದ ಕ್ರಿಕೆಟ್ ಆಟಗಾರ.
1]  [.[ಲಿಂಕ್ :-http://www.iloveindia.com/sports/cricket/history.html],Cricket, now termed as the unofficial national sport of India, has got an old history associated with its existence in the country. The oldest references to the sport in India can be dated as early as the year 1725 when some sailors played a friendly match at a seaport in Kutch. By the year 1792, the Calcutta Cricket and Football Club had been formed, and a yet another Cricket club had been formed at Seringapatam by the year 1799

2].[http://en.wikipedia.org/wiki/1799_English_cricket_season]
In the 1799 English cricket season, Surrey again beat All-England three times. As in the previous year, the number of matches declined due to the effect of the Napoleonic War.
A cricket club was formed at Seringapatam in south India after the successful British siege.

3][http://www.indianmirror.com/games/cricket/cricket-history.html]By the year 1792 the Calcutta cricket and football club had been formed and however another cricket club had been formed during 1799 at Seringapatam in South India. On 3rd march 1845 the Sepoy cricketers had played with the European cricketers in the place Sylhet located in (today’s Bangladesh).In 1848 The First Indian club was named as the Parsee Oriental cricket Club and the first match was held in Bombay (Mumbai).The first class cricket begin in the year 1864 where a match was held up between the madras and Calcutta team. The Bombay Presidency Matches was held in the year 1877.Later that was named the Bombay Triangular and then as Bombay Quadrangular.

ಬುಧವಾರ, ಜನವರಿ 25, 2012

ಇತಿಹಾಸದ ಹಲವು ಬಾವುಟಗಳನ್ನು ಹಾರಿಸಿದ್ದ ಐತಿಹಾಸಿಕ ಬತೇರಿ , ಇಂದು ರಾಷ್ಟ್ರ ದ್ವಜ ಹಾರಿಸುತ್ತದೆ.!!!!


ಐತಿಹಾಸಿಕ ಬತೇರಿ 

ಇಲ್ಲಿದೆ ನೋಡಿ ಬತೇರಿ
ಕಳೆದ ಸಂಚಿಕೆಯಲ್ಲಿ ಜಮ್ಮಾ ಮಸೀದಿ ಬಗ್ಗೆ ತಿಳಿದೆವು ಬನ್ನಿ ಇಲೊಂದು ಐತಿಹಾಸಿಕ ದ್ವಜ ದ ಕಂಬ ಹೊತ್ತ ಬತೇರಿ[ ಫ್ಲಾಗ್ ಪೋಸ್ಟ್ ] ಇದೆ ಅದನ್ನು ನೋಡೋಣ. ಶ್ರೀ ರಂಗ ಪಟ್ಟಣಕ್ಕೆ ಬರುವ ಪ್ರವಾಸಿಗರು ಇದನ್ನು ದೊರದಿಂದಲೇ ನೋಡಿ ಹೊರಟು ಹೋಗುತ್ತಾರೆ.ಅಥವಾ ಗಮನಿಸುವುದೇ ಇಲ್ಲಾ , ಪ್ರವಾಸಿ ಮಾರ್ಗದರ್ಶಿಗಳೂ ಸಹ ಇದಕ್ಕೆ ಅಂತಹ ಮಹತ್ವ ಕೊಡುವುದಿಲ್ಲ .  ಆದರೆ ಇದರ ಹತ್ತಿರ ಹೋದಾಗ ನಿಮಗೆ ತಿಳಿಯುತ್ತದೆ ಇದರ ಮಹತ್ವ. ಹೌದು ಈ ಜಾಗದಲ್ಲಿಯೇ 1799 ಮೇ 04 ರಂದು ಬ್ರಿಟೀಷರು ಮೈಸೂರಿನ ಅಂತಿಮ ಯುದ್ದದಲ್ಲಿ ಟಿಪ್ಪೂ ಮಡಿದ ನಂತರ ಶ್ರೀ ರಂಗ ಪಟ್ಟಣವನ್ನು ವಶಕ್ಕೆ ಪಡೆದ  ಕುರುಹಾಗಿ ಟಿಪ್ಪೂ ಸುಲ್ತಾನನ ರಾಜ್ಯ ಲಾಂಚನದ ಬಾವುಟ ಇಳಿಸಿ ಬ್ರಿಟೀಷ್ ಬಾವುಟವನ್ನು ಈ ಬತೆರಿಯ ಮೇಲೆ ಹಾರಿಸಿದ್ದರು.
ಯಾವ ಹಡಗಿನ ದ್ವಜ ಸ್ಥಂಬವೋ ಕಾಣೆ

ಭಾನುವಾರ, ಜನವರಿ 8, 2012

ಜುಮ್ಮಾ ಮಸೀದಿ ಒಳಗೆ ಅಡಗಿದೆ ಸೂರ್ಯ ಕಿರಣದ ಗಡಿಯಾರ !!!


ಜಮ್ಮಾ ಮಸೀದಿ

ಶ್ರೀ ರಂಗ ಪಟ್ಟಣದ  ಹಲವಾರು ಸ್ಮಾರಕಗಳ ಪರಿಚಯ ನಡಿಗೆಯಲ್ಲಿ  ಜೊತೆಯಾಗಿ ಬಂದಿದ್ದೀರಿ. ನಿಮಗೆ ೨೦೧೨ ರ ಶುಭಾಶಯಗಳು. ಬನ್ನಿ ಕಳೆದ  ಸಂಚಿಕೆಯಲ್ಲಿ  "ಇನ್ಮಾನ್ಸ್ ದಂಜನ್" ಜೈಲಿನ ಹೊರಗೆ ಬಂದರೆ ನಿಮಗೆ ಕಾಣ ಸಿಗುವುದೇ  ಹಳದಿ ಬಣ್ಣದ ಕಲಾ ವೈವಿಧ್ಯದ  ಈ "ಜಮ್ಮಾ ಮಸೀದಿ"    ನನಗೆ ದೊರೆತ 1897  ರ "SERINGAPATAM
AND ITS VICINITY " ಎಂಬ ದಾಖಲೆಯಂತೆ .                                                                                   OnIGIN OF l\IASZID-AULAJI OR THE GREAT MOSQUE.,
 Tippu, (then a boy of 7 years of age) alan
with H.ydel' Airs zenana in a house near the Ganja
gate, fl~cing a Hindu temple dedicated to Anjanaya;
Tippu ll.)OU to play with some Hindu boys in the spaci·
ous compound of tJJat temple; while ~() engaged it hap·
pened one day that a fakir passing tl':lt way and seeing
'l'ippu, adurcssec1 him as follows; "Oll! fortlmatp "
when thon art made king of this country, wami
temple to the grouucl and erect a mosque in it'
15and future generations will honour thee, and it wili
litand a memorial of thee." Tippu with a smiling face
said that whenever by his blessings he should be marle
king he would do so. And wben '1'ippu did become
king, he pulled down the temple and a mosque was
raisl"d on the site in 1790.




ಗುರುವಾರ, ಡಿಸೆಂಬರ್ 1, 2011

ಕಾಣದಂತೆ ಹಲವು ದಶಕಗಳು ಮರೆಯಾಗಿದ್ದ ಈ ಸೆರೆಮನೆಯನ್ನು ಇಂಜಿನಿಯರ್ ಒಬ್ಬ ಕಂಡುಹಿಡಿದು ಪರಿಚಯಿಸಿದರು.!!


ಹೌದು ಐತಿಹಾಸಿಕವಾಗಿ  ಮೆರೆದಾಡಿದ್ದ ಈ ಸೆರೆಮನೆ 1859 ರವರೆಗೂ ಅಜ್ಞಾತವಾಗಿ ಉಳಿದಿತ್ತು.ಆದರೆ  ಥಾಮಸ್ ಇನ್ಮಾನ್ ಎಂಬ  ಆಂಗ್ಲ  "ಎಗ್ಸಿಕುಟಿವ್ ಇಂಜಿನೀರ್ " ಈ ಸೆರೆಮನೆಯನ್ನು 1859  ರಲ್ಲಿ ಇದನ್ನು  ಪತ್ತೆ ಹಚ್ಚಿ ಗುರುತು ಹಿಡಿದ ಕಾರಣ ಅವರ  ಹೆಸರಿನ ಒಂದು ಕಮಾನು ನಿರ್ಮಿಸಿ ಈ ಸೆರೆಮನೆಗೆ "ಇನ್ಮಾನ್ ಡನ್ಜನ್ " ಎಂದು ಕರೆಯಲಾಗಿದೆ.ಬನ್ನಿ ಈ ಡನ್ಜನ್  ಹತ್ತಿರ ತೆರಳೋಣ.

ಗುರುವಾರ, ನವೆಂಬರ್ 17, 2011

ಟಿಪ್ಪು ಮಡಿದದ್ದು ಎಲ್ಲಿ ??? ದೇಹಸಿಕ್ಕಿದ್ದು ಎಲ್ಲಿ ??? ಈ ಎರಡು ಸ್ಮಾರಕಗಳ ಗತ ಇತಿಹಾಸದಲ್ಲಿ !!!





ಕಳೆದ ಹಲವಾರು ಸಂಚಿಕೆಗಳಿಂದ ನೀವು ಶ್ರೀರಂಗಪಟ್ಟಣದ ಹಲವಾರು ಸ್ಮಾರಕಗಳ ಪರಿಚಯ ಮಾಡಿಕೊಂಡಿದ್ದೀರಿ , ಬನ್ನಿ ಈ ಸಂಚಿಕೆಯಲ್ಲಿ ಎರಡು ಶತಮಾನಗಳ ಹಿಂದಿನ ಘಟನೆಯ ಎರಡು ಪ್ರಮುಖ ಸ್ಮಾರಕಗಳ ಪರಿಚಯ ಮಾಡಿಕೊಳ್ಳೋಣ . ಶ್ರೀ ಗಂಗಾಧರೇಶ್ವರ ಸ್ವಾಮೀ ದೇವಾಲಯದ ಉತ್ತರಕ್ಕೆ ಸಮೀಪದಲ್ಲಿ ನಿಮಗೆ "ವಾಟರ್ ಗೇಟ್" ಎಂದು ಇಂಗ್ಲೀಷಿನಲ್ಲಿ ನಾಮ ಫಲಕ ಹೊತ್ತ ಒಂದು ಕಮಾನು ಸುರಂಗ ಕಾಣಿಸುತ್ತದೆ.ಅದರ ಸಮೀಪ ಹೋದರೆನಿಮಗೆ ಒಂದು ಕಾಲು ಹಾದಿ ನಿಮ್ಮನ್ನು ಕಾವೇರಿ ನದಿಯೆಡೆಗೆ ಕರೆದೊಯ್ಯುತ್ತದೆ . ಬಹಳ ಹಿಂದೆ ಅರಮನೆಯ ಪ್ರಮುಖರು ಕಾವೇರಿ ನದಿಗೆ ತೆರಳಲು ಈ ಸುರಂಗ ಬಾಗಿಲನ್ನು ಉಪಯೋಗಿಸುತ್ತಿದ್ದರೆಂದು ಹೇಳಲಾಗುತ್ತದೆ.

1799 ರ ಮೇ ೪ ರಂದು ನಡೆದ ಅಂತಿಮ ಯುದ್ದದಲ್ಲಿ ಬ್ರಿಟೀಷರೊಡನೆ ಕಾದಾಡಲು ಹೋದ ಟಿಪ್ಪೂ ಸುಲ್ತಾನನು ಈ ಪ್ರದೇಶದ ವಾಟರ್ ಗೇಟ್ ಹೊಕ್ಕನೆಂದೂ ಕಾದಾಟದ ಒಂದು ಘಟ್ಟದಲ್ಲಿ ಕೆಲವು ಕುತಂತ್ರಿಗಳ ಸಂಚಿನಿಂದ ಇಲ್ಲಿನ ಬಾಗಿಲನ್ನು ಮುಚ್ಚಲಾಯಿತೆಂದು ಇದರಿಂದಾಗಿ ಟಿಪ್ಪೂ ಸುಲ್ತಾನ್ ವೈರಿಗಳ ಹೊಡೆತಕ್ಕೆ ಸಿಕ್ಕಿ ವೀರ ಮರಣ ಹೊಂದಿದನೆಂದೂ ತಿಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಹಲವಾರು ದಾಖಲೆಗಳು ಹೇಳಿದರೂ ಮತ್ತಷ್ಟು ದಾಖಲೆಗಳು ಟಿಪ್ಪು ಸುಲ್ತಾನ್ ಇಲ್ಲಿ ಮರಣ ಹೊಂದಲಿಲ್ಲವೆಂದೂ ಈ ಸ್ಮಾರಕ ದ ಪೂರ್ವಕ್ಕೆ ೧೦೦ ಯಾರ್ಡ್ ನಲ್ಲಿ ಸ್ತಾಪಿಸಲಾಗಿರುವ ಸ್ಮಾರಕವೇ ನಿಜವಾದ ನಿಖರವಾದ ಸ್ಮಾರಕವೆಂದು ಹೇಳುತ್ತಿವೆ.ಆದರೆ ಅತೀ ಹೆಚ್ಚಿನ ದಾಖಲೆಗಳು ಪ್ರತಿ ಪಾದಿಸುತ್ತಿರುವುದು, ಗೆಜೆಟ್ ಗಳಲ್ಲಿನ ಮಾಹಿತಿಗಳು ಹಾಗು ಅಂತರ್ಜಾಲದಲ್ಲಿ ಸಿಗುತ್ತಿರುವ ಮಾಹಿತಿಗಳು ಟಿಪ್ಪೂ ಸುಲ್ತಾನ್ ಮರಣ ಹೊಂದಿದ ಸ್ಥಳವೆಂದು "ವಾಟರ್ ಗೇಟ್" ನತ್ತ ಬೆರಳು ತೋರುತ್ತಿವೆ. ಇದರಲ್ಲಿ ಸತ್ಯವೇನೆಂಬ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ , ಸಂಶೋದನೆ ಅಗತ್ಯ ವಿದೆ. ಆದರೂ ಈ ಎರಡು ಸ್ಮಾರಕಗಳ ಸಮೀಪ ಎಲ್ಲೋ ಒಂದು ಕಡೆ ಟಿಪ್ಪೂ ವೀರಮರಣ ಹೊಂದಿದನೆಂದು ಬಾವಿಸಬಹುದು.ಮೈಸೂರಿನ ಇತಿಹಾಸದ ಒಬ್ಬ ಪ್ರಮುಖ ಪಾತ್ರದಾರಿ , ಶ್ರೀ ರಂಗಪಟ್ಟಣದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿದ ಟಿಪ್ಪೂ ಸುಲ್ತಾನ ಇಲ್ಲಿ ತನ್ನ ಅಂತಿಮ ಪಯಣ ಮುಗಿಸಿದ್ದ!!!!, ಆದಕಾರಣ ಈ ಸ್ಮಾರಕಗಳು ಐತಿಹಾಸಿಕ ದೃಷ್ಟಿಯಿಂದ ಪ್ರಮುಖವಾಗಿವೆ. ಟಿಪೂ ಸುಲ್ತಾನನ ದೇಹ ಸಿಕ್ಕಿದ ಜಾಗವೆಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದ್ದು ಅದರ ಚಿತ್ರಗಳು ಇಲ್ಲಿವೆ ಈ ಸಂಚಿಕೆಯಲ್ಲಿ ಎರಡು ಸ್ಮಾರಕಗಳನ್ನು ಪರಿಚಯ ಮಾಡಿದ್ದು ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ ಅಲ್ಲಿಯವರೆಗೆ ಶುಭ ಸಮಯ.

ಮಂಗಳವಾರ, ನವೆಂಬರ್ 1, 2011

ಶ್ರೀ ರಂಗ ಪಟ್ಟಣದಲ್ಲಿ ಶ್ರೀಗಂಧದ ಶೇಖರಣೆಗೆ ಒಂದು ದಾಸ್ತಾನು ಕೋಠಿ ಇತ್ತು!!! ಅದೇ ಸ್ವಾಮೀ ಸಂದಿಲ್ ಕೋಟಿ!!!!!


ಗತ ಕಾಲದ  ವೈಭವ ಕಳೆದುಕೊಂಡ  ಶ್ರೀ ಗಂಧ ದಾಸ್ತಾನು ಕೋಠಿ

ಬಹಳ ದಿನಗಳ ನಂತರ ಮತ್ತೆ ನನ್ನನ್ನು  ಇಲ್ಲಿಗೆ ಕರೆತಂದ  ವಿಚಾರ ಇದು  . ಹಿಂದಿನ ಸಂಚಿಕೆಯಲ್ಲಿ ನಿಮಗೆ ಗಂಗಾಧರೇಶ್ವರ ಸ್ವಾಮೀ ದೇವಾಲಯ ಪರಿಚಯ ಮಾಡಿಕೊಟ್ಟಿದ್ದೆ.   ಅದಕ್ಕೆ ಸನಿಹದಲ್ಲೇ  ಕಂಡುಬರುವುದು ಈ ಸ್ಮಾರಕ . ಹೈದರ್ ಅಲಿ  ಹಾಗು ಟಿಪ್ಪೂ ಸುಲ್ತಾನನ ಕಾಲದ್ದೆಂದು ಹೇಳಲಾಗುವ ಈ ಸ್ಮಾರಕ  ಶ್ರೀ ರಂಗ ಪಟ್ಟಣದ ಪ್ರಮುಖ ಆರ್ಥಿಕ ವಹಿವಾಟಿನ ಕೇಂದ್ರವಾಗಿತ್ತು.  ಹೌದು ಹಿಂದೆ ಆಳ್ವಿಕೆ ನಡೆಸಿದ್ದ ಬಹುಷಃ ಎಲ್ಲಾ  ರಾಜ್ಯಗಳ ರಾಜರು ತಮ್ಮ ರಾಜ್ಯದ ಆರ್ಥಿಕ ಮಟ್ಟ ಹೆಚ್ಚಿಸಲು  ಅಮೂಲ್ಯವಾದ ಉತ್ಪನ್ನಗಳ ರಫ್ತು ಮಾಡಿ ತಮ್ಮ ಖಜಾನೆ ತುಂಬಿಸಿ ಕೊಳ್ಳುತ್ತಿದ್ದರು . ಅಂತಹ ಒಂದು ಪ್ರಮುಖ ದಾಸ್ತಾನು ಮಳಿಗೆ ಇದು . ದಕ್ಷಿಣ ಕರ್ನಾಟಕ ಪ್ರಾಂತ ಶ್ರೀ ಗಂಧದ  ಮರಗಳಿಗೆ ಹೆಸರುವಾಸಿ. ಈ ಮರಗಳ ಉತ್ಪನ್ನ ಮಾರಾಟ ಮಾಡಿ ಅಂದು ಅತೀ ಹೆಚ್ಚು ಲಾಭ ಮಾಡಿಕೊಂಡವರು ಹೈದರ್ ಹಾಗು ಟಿಪ್ಪೂ ಸುಲ್ತಾನ್.  ಅಂದಿನ ಕಾಲದಲ್ಲಿ ಶ್ರೀಗಂಧ ಮರದ ಮಾರಾಟ ಅತೀ ಲಾಭ ಕೊಡುವ ಆರ್ಥಿಕ  ವಹಿವಾಟು ಆಗಿತ್ತೆಂದು     ತೋರುತ್ತದೆ.ಇಂತಹ ಅಮೂಲ್ಯ ಶ್ರೀ ಗಂಧದ ಮರಗಳನ್ನು ,ಹಾಗು ಉತ್ಪನ್ನಗಳನ್ನು ಸಂರಕ್ಷಿಸಲು  ಹಾಗು ವಹಿವಾಟು ನಡೆಸಲು ಇದ್ದ ಕೇಂದ್ರವೇ ಈ  "ಸೆಂದಿಲ್ ಕೋಠಿ "
ಅಂದಿನ ವೈಭವದ ಸಂದಲ್  ಕೋಟಿ[ ಚಿತ್ರ ಕೃಪೆ ಅಂತರ್ಜಾಲ]

  ಅಂದು ಈ ಕೋಠಿಯ ವೈಭವ ತೋರುವ ಅಪರೂಪದ ಹಳೆಯ ಚಿತ್ರ  ಇಲ್ಲಿದೆ ನೋಡಿ  ಅದರ ರಕ್ಷಣೆಗೆ ನಿಂತ ಸಿಬ್ಬಂಧಿಗಳನ್ನೂ ನೀವು ಚಿತ್ರದಲ್ಲಿ ಕಾಣಬಹುದು. ಈ ಚಿತ್ರ ಸುಮಾರು ಒಂದು ನೂರ ಇಪ್ಪತ್ತು ವರ್ಷಗಳ ಹಿಂದೆ ತೆಗೆಯಲಾಗಿದ್ದು  ಇತಿಹಾಸದ ವೈಭವದ ದಿನಗಳನ್ನು ಜ್ಞಾಪಿಸುತ್ತದೆ. ಸ್ವಲ್ಪ ಗಮನಿಸಿ  ಕೋಠಿಯ  ಪ್ರವೇಶ ದ್ವಾರದಲ್ಲಿ  ಶ್ರೀ ಗಂಧದ ಮರದ ತುಂಡುಗಳಿಂದ ಕಲಾತ್ಮಕವಾಗಿ  ಸಿಂಗರಿಸಿರುವುದನ್ನು ನಾವು ಕಾಣಬಹುದು .ಇಷ್ಟೆಲ್ಲಾ ಮೆರೆದಾಡಿದ  ಈ ಭವ್ಯ ಪ್ರದೇಶದಲ್ಲಿ  ಮೈಸೂರಿನ ಅಂತಿಮ ಯುದ್ದದ ನಂತರ ಇದರ ವಹಿವಾಟು ಸ್ಥಗಿತಗೊಂಡು ಆನಂತರದ ದಿನಗಳಲ್ಲಿ  ಸ್ವಲ್ಪ ಕಾಲ ಪುರಸಭೆ ಕಚೇರಿಯಾಗಿ  ನಂತರ ಈಗ "ಕುಸ್ತಿ"  ಅಖಾಡವಾಗಿ  ನಿಂತಿದೆ.
ಹಾಲಿ ಕುಸ್ತಿ ಅಖಾಡ ಹೀಗಿದೆ 
ಇತಿಹಾಸದ ಅಣಕ ವೆಂದರೆ  ಇದೆ ಅಲ್ಲವೇ?? ಗತಕಾಲದ ನೆನಪಿನಲ್ಲಿ  ಇಲ್ಲಿಂದ ವಿದೇಶಗಳಿಗೆ  ಕನ್ನಡ ಸೀಮೆಯ ಶ್ರೀ ಗಂಧ ರಫ್ತಾಯಿತೆ  ಎಂಬ ಪ್ರಶ್ನೆಗೆ  ಹಾಲಿ ಉತ್ತರವಿಲ್ಲ. ಹಾಗು ಈ ಸ್ಮಾರಕ  ಹೇಗಿತ್ತು ಎಂಬ ಕಲ್ಪನೆ ಇಂದಿನ ಪೀಳಿಗೆಗೆ ಸಿಗುತ್ತಿಲ್ಲ. ಇತಿಹಾಸ ಕೆಣಕಿದರೂ ಹಲವಾರು ಸ್ಮಾರಖಗಳ  ಬಗ್ಗೆ ಮಾಹಿತಿ ಸಿಗುವುದು ಕಷ್ಟವಾಗಿದೆ .ಯಾಕೆಂದ್ರೆ ನಿಜವಾದ ಮಾಹಿತಿ ಕಾಲಗರ್ಭದ ಒಳಗೆ  ಸಿಗಲಾರದಷ್ಟು  ಆಳಕ್ಕೆ ಸೇರಿಬಿಟ್ಟಿದೆ. ಈ ಸ್ಮಾರಕ   ಬಗ್ಗೆ ನನ್ನ ಬಳಿ ಇರುವುದು ಇಷ್ಟೇ ಮುಂದಿನ ಸಾರಿ ಮತ್ತೊಂದು ಸ್ಮಾರಕ  ಪರಿಚಯ ಮಾಡಿ ಕೊಳ್ಳೋಣ. ಅಲ್ಲಿಯವರೆಗೆ  ಶುಭ ಸಮಯ.[

ಸೋಮವಾರ, ಆಗಸ್ಟ್ 8, 2011

ಈ ದ್ವೀಪದಲ್ಲಿ ಹರಿಯಜೋತೆಗೆ ಹರನೂ ಇದ್ದಾನೆ !!!!! ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ನೋಡೋಣ ಬನ್ನಿ !!!


ಶ್ರೀ ಗಂಗಾಧರೇಶ್ವರ ದೇವಾಲಯ.
ಕಳೆದ ಸಂಚಿಕೆಯಲ್ಲಿ ಲಾಲ್ ಮಹಲ್ ಅರಮನೆಯ ಬಗ್ಗೆ ತಿಳಿದು ಕೊಂಡಿರಿ.ಅದಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿಗೆ ಮುಖಮಾಡಿರುವ ಒಂದು ದೇವಾಲಯ ನೀವು ನೋಡಬಹುದು. ಅದೇ ಗಂಗಾಧರೇಶ್ವರ ದೇವಾಲಯ.ಹೌದು ಈ ಸುಂದರ ದ್ವೀಪದಲ್ಲಿ ಹರಿಯ ಜೊತೆಗೆ ಹರನೂ ನೆಲೆಸಿದ್ದಾನೆ. ಈ ದೇವಾಲಯದ ಬಗ್ಗೆ  ಬೆಂಗಳೂರಿನ ಖ್ಯಾತ ಪತ್ರಕರ್ತರಾದ ಶ್ರೀ ರಿಗ್ರೆಟ್ ಐಯ್ಯರ್ ಅವರು ಸಂಕ್ಷಿಪ್ತವಾಗಿ ಹಾಗು ಸುಂದರವಾಗಿ ಮಾಹಿತಿ ಕೈಪಿಡಿ ತಯಾರಿಸಿ  ಉಚಿತವಾಗಿ ಪ್ರಕಟಣೆ ಮಾಡಿದ್ದಾರೆ. ಬನ್ನಿ ಒಂದಷ್ಟು ಮಾಹಿತಿ ತಿಳಿಯೋಣ.ಶ್ರೀರಂಗ ಪಟ್ಟಣದ ಕೋಟೆ ಕಟ್ಟುವ ಮುನ್ನ  ಲಿಂಗದ ಮೇಲೆ ಕಾವೇರಿ ಹರಿದು ಹೋಗುತ್ತಿದ್ದ ಕಾರಣ , ಹಾಗು ಶಿವಲಿಂಗ ಕಾವೇರಿ ನದಿಯ ಮಧ್ಯಭಾಗದಲ್ಲಿ ಇದ್ದಕಾರಣ  ಅಂದಿನ ನಾಗರೀಕರು  ನಡುಹೊಳೆ  ಗಂಗಾಧರ " ಎಂಬ ಹೆಸರನ್ನು ಕರೆಯುತ್ತಿದ್ದರು ,ಲಿಂಗದ ಮೇಲೆ ಎಲ್ಲೆಡೆಯಲ್ಲೂ  ಶಿಲೆಯಲ್ಲಿ ಕೂದಲು  ಜಡೆ ರೀತಿಯಲ್ಲಿ  ಮೂಡಿರುವ ಕಾರಣ" ಜಡೆ ಗಂಗಾಧರೇಶ್ವರ" ಅಂತಾನೂ ಕರೆಯಲಾಗುತ್ತಿದೆ. ದ್ವೀಪದಲ್ಲಿ  ನೆಲೆಸಿದ್ದ "ಗೌತಮ ಋಷಿಗಳು " ಚೈತ್ರಮಾಸದ ಚಿತ್ರಾ ಪೂರ್ಣಿಮೆಯಂದು  ಗಂಗಾಧರೆಶ್ವರನನ್ನು  ಪೂಜಿಸಿದ ಕಾರಣ ಇಂದಿಗೂ ಅದೇ ಚಿತ್ರಾ ಪೂರ್ಣಿಮೆಯಂದು  ಈ ದೇವಾಲಯದಲ್ಲಿ  ಬ್ರಹ್ಮ ರಥೋತ್ಸವ ಜರುಗುತ್ತದೆ.                                                       

ಭಾನುವಾರ, ಜುಲೈ 3, 2011

"ಟಿಪ್ಪು ಸುಲ್ತಾನ " ವಾಸಿಸಿದ ಖಾಸಾ ಅರಮನೆ ಈ ಲಾಲ್ ಮೆಹಲ್ !!!!!

ದರ್ಬಾರ್ ಹಾಲ್

ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಪೂರ್ವ ದಿಕ್ಕಿಗೆ  ಸಾಗಿ ಅಲ್ಲಿರುವ ವೃತ್ತದಲ್ಲಿ ಎಡಕ್ಕೆ ತಿರುಗಿದರೆ ಸ್ನಾನ ಘಟ್ಟಕ್ಕೆ ದಾರಿ ಸಾಗುತ್ತದೆ , ಆ  ದಾರಿಯಲ್ಲಿ  ಬಲಗಡೆ  ಸುತ್ತಲೂ ಜಾಲರಿ ಹಾಕಿದ  ಒಂದು ಪಾಳು ಗೋಡೆಗಳ ದರ್ಶನ ನಿಮಗೆ ಆಗುತ್ತದೆ . ಆ ಸ್ಮಾರಕವೇ   "ಲಾಲ್  ಮಹಲ್ "  ಅಥವಾ "ಟಿಪ್ಪು ಸುಲ್ತಾನ"    ಖಾಸಾ ಅರಮನೆ .  
ಲಾಲ್ ಮೆಹಲ್ ಒಳಗಿನ ಮೆಟ್ಟಿಲುಗಳು
      
ಈ ಅರಮನೆ ಬಗ್ಗೆ ಹೆಚ್ಚಿನ ಮಾಹಿತಿ ಶ್ರೀ ರಂಗ ಪಟ್ಟಣ ಅಥವಾ ರಾಜ್ಯದ/ದೇಶದ  ಅಧಿಕೃತ ದಾಖಲೆಗಳಲ್ಲಿ  ಇಲ್ಲವಾದರೂ  ಕೆಲವು ವಿದೇಶಿ ಪ್ರಕಟಣೆ ಗಳ  ಪುಸ್ತಕ /ಅಂತರಜಾಲದಲ್ಲಿ ಜಾಲಾಡಿದಾಗ ಅಲ್ಪ ಸ್ವಲ್ಪ ಮಾಹಿತಿ ದೊರಕುತ್ತದೆ. ಬನ್ನಿ" ಲಾಲ್ ಮಹಲ್ " ಬಗ್ಗೆ ತಿಳಿಯೋಣ"ಲಾಲ ಮಹಲ್ " ಅಂದರೆ ಕೆಂಪು ಅರಮನೆ ಎಂದು ಅರ್ಥ. ಈ ಅರಮನೆಯ ಗೋಡೆಗಳೆಲ್ಲಾ ಕೆಂಪು ಬಣ್ಣದಿಂದ ಕೂಡಿದ್ದು ಈ ಹೆಸರು ಬರಲು ಕಾರಣವೆಂದು ತಿಳಿಯುತ್ತದೆ. ಕೆಳಗಡೆ ವಿಶಾಲವಾದ "ದರ್ಭಾರ್ ಹಾಲ್" ಹೊಂದಿದ್ದು ಎರಡು  ಅಂತಸ್ತಿನ ಈ ಅರಮನೆ  ಅತ್ಯಂತ ಬಿಗಿ ಬಂದೋಬಸ್ತ್  ಹೊಂದಿತ್ತು.  ಟಿಪ್ಪು ಸುಲ್ತಾನ ನ ಖಾಸಗಿ ಜೀವನ ಈ ಅರಮನೆಯಲ್ಲಿ ಕಳೆದಿತ್ತು. ಉತ್ತಮವಾದ ಪುಸ್ತಕಸಂಗ್ರಹ , ಜನಾನ[ ಟಿಪ್ಪೂ ಪತ್ನಿಯರ ವಾಸ ], ಅವನ ಅಮೂಲ್ಯ  ಸಂಪತ್ತಿನ ಸಂಗ್ರಹ , ಚಿನ್ನದಸಿಂಹಾಸನ ಎಲ್ಲವೂ ಬ್ರಿಟೀಷರಿಗೆ ದೊರೆತದ್ದು  ಇಲ್ಲಿಯೇ. ಅರಮನೆಯ  ಕೆಂಪು ಗೋಡೆಗಳ  ಮೇಲೆ ಚಿನ್ನ ಲೇಪಿತ ಅಕ್ಷರಗಳಲ್ಲಿ 'ಖುರಾನಿನ ಹಿತೋಕ್ತಿ" ಗಳನ್ನೂ ಬರೆಸಿದ್ದನೆಂದು ಕೆಲವೆಡೆ ಹೇಳಲಾಗಿದೆ .  ಅರಮನೆಯ ಹೊರಗೆ ಹಾಗು ಒಳಗೆ ಹುಲಿಗಳನ್ನು ಸರಪಳಿಗಳಿಂದ ಕಟ್ಟಿ  ಕಾವಲಿಗೆ ನಿಲ್ಲಿಸಲಾಗಿತ್ತೆಂದು ಕೆಲವೆಡೆ  ಹೇಳಲಾಗಿದೆ .                

ಗುರುವಾರ, ಜೂನ್ 23, 2011

ಜಿ.ಬಿ. ಗೇಟು ಏನು ನಿನ್ನ ಗುಟ್ಟು!!! ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ !!!


ಜಿ.ಬಿ.ಗೇಟು !!!!
ಬಹಳ ದಿನಗಳ ನಂತರ ಮತ್ತೊಮ್ಮೆ ಈ ಬ್ಲಾಗ್  ಬರೆಯಲು ಕುಳಿತೆ , ಯಾರಿಗೂ ಬೇಡದ ವಿಚಾರ ವನ್ನು ತಿಳಿಸುವುದು ಬೇಡವೆಂದು ಅನ್ನಿಸಿತ್ತು ಆದರೂ ನನ್ನ ಮನಸ್ಸಿನ ಸಂತೋಷಕ್ಕೆ ಬರೆಯಲು ಕುಳಿತೆ ."ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ".ಮುಂದೊಮ್ಮೆ ಯಾರಿಗಾದರು  ಈ ಮಾಹಿತಿ ಖಂಡಿತಾ ಅನುಕೂಲ ವಾಗಬಹುದೆಂಬ ನಂಬಿಕೆ ನನಗಿದೆ,  ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಸಮೀಪ ಉತ್ತರಕ್ಕೆ ಕೋಟೆಯೊಳಗೆ ಒಂದು ಸಣ್ಣ ಬಾಗಿಲು ನಿಮ್ಮನ್ನು ಸೆಳೆಯುತ್ತದೆ !!. ಅದೇ ಜಿ.ಬಿ.ಗೇಟ್ ಅಂತ ಕರೆಯುವ ಬಾಗಿಲು.ಈ ಬಾಗಿಲಿಗೆ ಜಿ.ಬಿ. ಗೇಟ್ ಅಂತ ಹೆಸರು ಹೇಗೆ ಬಂತು ಎಂಬ ಮಾಹಿತಿ ಎಲ್ಲಿಯೂ ದಾಖಾಲಾಗಿರುವುದು ಕಂಡುಬಂದಿಲ್ಲ !![ಕೆಲವರು ಹೇಳುವಂತೆ ಈ ಗೇಟ್ ಅನ್ನು gate where the british enterd ಎಂದು ತಿಳಿಸುತ್ತಾರೆ! ಈ ಬಗ್ಗೆ ವಿವರ ತಿಳಿದಿಲ್ಲ ]ತನ್ನ ಗುಟ್ಟನ್ನು ಬಿಟ್ಟು ಕೊಡದ ಈ ಗೇಟಿನ ಆವರಣದೊಳಗೆ ಒಂದು ಹನುಮಂತನ ದೇವಾಲಯವಿದ್ದು ಕೋಟೆಯೊಳಗೆ ಸೇರಿಕೊಂಡಿದೆ .ಒಟ್ಟಿನಲ್ಲಿ ಜಿ.ಬಿ.ಗೇಟು ತನ್ನ ಗುಟ್ಟನ್ನು ಬಿಡದೆ ಗತಿಸಿಹ ಇತಿಹಾಸದ ಘಟನೆಗಳ ಮೂಕ ಸಾಕ್ಷಿಯಾಗಿ ಎಲೆಮರೆ ಕಾಯಿ ಯಂತಿದೆ.....! { ಇದರ ಬಗ್ಗೆ ಮಾಹಿತಿ ಇದ್ದವರು ಮಾಹಿತಿ ನೀಡಲು ಕೋರಿದೆ}ಆದರೆ ಕೆಲವು ದಾಖಲೆಗಳಲ್ಲಿ ಈ ಬಾಗಿಲಿನ ಮೂಲಕ ಬಾಂಬೆ ಸೈನ್ಯ ವನ್ನು ಯುದ್ದದಲ್ಲಿ ಎದುರಿಸಲಾಯಿತೆಂದು ಹೇಳಲಾಗಿದೆ . ಬನ್ನಿ ಒಳಗಡೆ ಹೋಗೋಣ  ಜಿ ಬಿ ಗೇಟಿನ ಒಳಗಡೆ ಬಾಗಿಲನ್ನು ಪ್ರವೇಶಿಸಿದರೆ ಮೆಟ್ಟಿಲುಗಳನ್ನು ಇಳಿದು ನಡೆದರೆ ನಿಮ್ಮ ಎಡ ಭಾಗಕ್ಕೆ  ಒಂದು ಆವರಣ ಗೋಚರಿಸುತ್ತದೆ ಇದು ಕೋಟೆಯ ಗೋಡೆಯೊಳಗೆ ಅವಿತು ಕೊಂಡಿದೆ. ಹೊರಗಡೆ ಕಾಣುವುದಿಲ್ಲ.ಹಾಗೆ ಎಡಗಡೆ ಸಿಗುವ ಹಜಾರ ಪ್ರವೇಶಿಸಿದರೆ  ಹನುಮನ ವಿಗ್ರಹ ಸಿಗುತ್ತದೆ  ದರ್ಶನ ಪಡೆದು ಮುಂದುವರೆದರೆ ಮತ್ತೊಂದು ಬಾಗಿಲು ನಿಮಗೆ ಕೋಟೆಯ ಪಕ್ಕದಲ್ಲಿ ಹರಿಯುವ ಕಾವೇರಿ ನಧಿಯ ದರ್ಶನ ಮಾಡಿಸುತ್ತದೆ
ಜಿ.ಬಿ.ಗೇಟು ಒಳಗಡೆ  ಕಾಣುವ ಹನುಮ ಸನ್ನಿಧಿ!!!!
ಜಿ ಬಿ.ಗೇಟಿನ ಒಳಗಡೆ ಹನುಮ ದೇಗುಲದಲ್ಲಿನ ಹಜಾರ!!!!!
ಈ ಗೇಟಿನಿಂದ ಹೊರ ಬಂದ ಸೈನ್ಯ ಬಾಂಬೆ ಸೈನ್ಯನ್ನು ಎದುರಿಸಿತಂತೆ!!!!!

 ಇದೆ ಬಾಗಿಲಿನ ಮೂಲಕ ಟಿಪ್ಪುವಿನ ಸೈನ್ಯ ಬಾಂಬೆಯ ಸೈನ್ಯ ವನ್ನು ಎದುರಿಸಿತೆಂದು ಹೇಳುತ್ತಾರೆ.ಹಾಗೆ ಮುಂದುವರೆದು ನಡೆದ ನನಗೆ ಒಣಗಿದ ನದಿಯಲ್ಲಿ  ಒಂದು ಶಿಲ್ಪಕಲಾ ಕೃತಿ  ಕಂಡು ಬಂತು.

ಭಾನುವಾರ, ಫೆಬ್ರವರಿ 20, 2011

ಕರ್ನಲ್ ಬೈಲೀ ಡನ್ಜನ್ ಹಾಗು ಪ್ರವಾಸಿಗಳು ಅವರಿಗೆ ತಕ್ಕ ಗೈಡುಗಳು!!!


ಬನ್ನಿ  ಇಲ್ಲೊಂದು ಜೈಲಿದೆ ಅಲ್ಲಿಗೆ ಭೇಟಿ ಕೊಡೋಣ.ರಂಗನಾಥ ಸ್ವಾಮೀ ದೇವಾಲಯದ ಸ್ವಲ್ಪ ಸಮೀಪ  ಉತ್ತರಕ್ಕೆ ಈ ಜೈಲು ಅಥವಾ  ಡನ್ಜನ್  ಕಾಣಲು ಸಿಗುತ್ತದೆ. ಹೊರಗಡೆ ಇಂದ ನೋಡಿದರೆ ಒಂದು ಕಾವಲು ಬುರುಜಿನಂತೆ ಕಾಣುವ ಇದನ್ನು  "ಸುಲ್ತಾನ್ ಬತೇರಿ " ಎಂದು ಕರೆಯಲಾಗುತ್ತಿತ್ತೆಂದು ಕೆಲವು ಗೆಜೆಟ್ ದಾಖಲೆಗಳು ತಿಳಿಸುತ್ತವೆ.ಈ ಪ್ರದೇಶದಲ್ಲಿ ಅತಿಯಾದ ಬಿಗಿ ಕಾವಲು ಪಡೆಗೆ ಸೈನಿಕರನ್ನು ನಿಯೋಜಿಸಲಾಗುತ್ತಿತ್ತೆಂದು ತಿಳಿದುಬರುತ್ತದೆ. ಕಾವಲು ಬತೇರಿ ಕೆಳಗೆ ನೆಲಮಾಳಿಗೆ ಯಲ್ಲಿ ಜೈಲು ನಿರ್ಮಾಣವಾಗಿದ್ದು  ಆಂಗ್ಲ  ಅಧಿಕಾರಿಗಳನ್ನು ಇಲ್ಲಿ ಸೆರೆಯಲ್ಲಿ ಇಟ್ಟಿದ್ದರೆಂದು ತಿಳಿದುಬರುತ್ತದೆ.ಹಾಗೆ ಸೆರೆಯಲ್ಲಿಟ್ಟ ಅಧಿಕಾರಿಗಳಲ್ಲಿ "ಕರ್ನಲ್ ಬೈಲಿ" ಸಹ ಸೆರೆಯಲ್ಲಿದ್ದನೆಂದು ,ತಿಳಿಸಲಾಗಿದೆ . ನಂತರ ಇವನು ಶ್ರೀ ರಂಗ ಪಟ್ಟಣ ಅಂತಿಮ ಯುದ್ದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ತಿಳಿದುಬರುತ್ತದೆ. ಹಾಗಾಗಿ ಈ ಜೈಲಿಗೆ ಕರ್ನಲ್ ಬೈಲೀ ದಂಜನ್ಎಂದು ಕರೆಯಲಾಗಿದೆ  ಎಂದು ತಿಳಿಸುತ್ತಾರೆ.ಇದರ ಬಗ್ಗೆ ಸರಿಯಾದ ಮಾಹಿತಿ ಹೊರಬರಬೇಕಾಗಿದೆ.ಏನೇ ಇರಲಿ ಹಾಲಿ ಇದನ್ನು ಕರ್ನಲ್ ಬೈಲೀ ದಂಜನ್ ಅಂತಾನೆ ಕರೀತಾರೆ.                      ಈ ನೆಲಮಾಳಿಗೆಯ ಜೈಲು 100x 40 ಅಡಿ ಇದ್ದು  ಚಪ್ಪಟೆ ಆಕಾರದ    ಇಟ್ಟಿಗೆ ಹಾಗು ಗಚ್ಚುಗಾರೆಯಿಂದ ನಿರ್ಮಿತಗೊಂಡಿದೆ. ಕೈಧಿಗಳನ್ನು ಇಲ್ಲಿ ಕಲ್ಲಿನ ಗೂಟಗಳಿಗೆ ಕಬ್ಬಿಣದ ಸರಪಣಿಹಾಕಿ   ಕಟ್ಟಿಹಾಕುತ್ತಿದ್ದರೆಂದು ತಿಳಿದುಬರುತ್ತದೆ. ಇದರ ಪ್ರಾತ್ಯಕ್ಷಿಕೆಯನ್ನು ನನ್ನ ಸ್ನೇಹಿತ ಸತ್ಯ ರವರು ತೋರಿದ್ದು ಹೀಗೆ . ಅಬೇದ್ಯವಾದ ಈ ಜೈಲಿನಲ್ಲಿ ಖೈದಿ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಬನ್ನಿ ಇಲ್ಲೊಂದು  ವಿಶೇಷವಿದೆ. ಜಲಿನ ಮಧ್ಯಭಾಗದಲ್ಲಿ  ಒಂದು ದೊಡ್ಡ  ಪಿರಂಗಿ  ಬಿದ್ದಿದೆ. ಇಲ್ಲಿಗೆ ಬರುವ ಪ್ರವಾಸಿಗಳಿಗೆ ಕೆಲವು ಕೆಲವು ಗೈಡುಗಳು ಹೇಳುತ್ತಿದ್ದ ವಿಚಾರ ಅಚ್ಚರಿಮೂಡಿಸುತ್ತದೆ. ಆಗತಾನೆ ಬಂದ  ಪ್ರವಾಸಿಗಳ ಗುಂಪಿಗೆ ಒಬ್ಬ ಗೈಡ್ ಹೇಳುತ್ತಿದ್ದ " ನೋಡಿ ಸಾರ್ ಈ ಪಿರಂಗಿ ಇದ್ಯಲ್ಲಾ ಇದನ್ನು ಬ್ರಿಟೀಷರು  ಶ್ರೀ ರಂಗಪಟ್ಟಣ  ಯುದ್ದ ಮಾಡುವಾಗ ಕರಿ ಘಟ್ಟ ಬೆಟ್ಟದಿಂದ ಹಾರಿಸಿದರು ಅಲ್ಲಿಂದ ಹಾರಿಕೊಂಡು ಬಂದ ಈ ಪಿರಂಗಿ ಇಲ್ಲಿಗೆ  ಬಂದು ಬಿದ್ದಿದೆ."ಎಂದು ತನ್ನ ಲಾಜಿಕ್ ಹೇಳಿದ್ದ.[ಪಾಪ ಪಿರಂಗಿ ಗುಂಡು ಹಾರುತ್ತದೆಯೇ ಹೊರತಾಗಿ ಪಿರಂಗಿ ಹಾರುತ್ತದೆಂಬ ಅವನ ಮಾತನ್ನು  ಸರಿಪಡಿಸುವವರು ಯಾರೂ ಇಲ್ಲ.] ಇದನ್ನು ಯೋಚಿಸದ  ಪ್ರವಾಸಿಗರು  ಅವನು ಹೇಳಿದ ಇತಿಹಾಸ ಕೇಳಿಕೊಂಡು ಅವನಿಗೆ ತಮ್ಮ ಕಾಣಿಕೆ ನೀಡಿದ್ದರು.          ಆದರೆ ವಾಸ್ತವವಾಗಿ ಇದು ಅಂತಿಮ ಮೈಸೂರು ಯುದ್ದದ ಸಮಯದಲ್ಲಿ  ಬುರುಜಿನ ಮೇಲಿದ್ದ ಈ ಪಿರಂಗಿ  ಗುಂಡು ಹಾರಿಸಿದ ರಭಸಕ್ಕೆ  ಹಿಂದೆ ಸರಿದು ಆಯ  ತಪ್ಪಿ ಚಾವಣಿಯನ್ನು ತೂತುಮಾಡಿಕೊಂಡು ಬಂದು  ಕೆಳಗೆ ಬಿದ್ದಿದೆ ಎನ್ನುವುದು ನಿಜ ಸಂಗತಿ. ಪ್ರವಾಸದ ಒತ್ತಡದಲ್ಲಿ ಪ್ರವಾಸಿಗಳು  ಗೈಡುಗಳು ಹೇಳಿದ ಮಾಹಿತಿಯನ್ನು ಪರಿಶೀಲಿಸದೆ  ಹೇಳಿದ್ದನ್ನು ಒಪ್ಪಿಕೊಂಡು  ಹಣ ಕೊಟ್ಟು ಹೊರಡುತ್ತಾರೆ. ನಿಜವಾದ ಇತಿಹಾಸ ತಿಳಿದು ಮಾಹಿತಿ ನೀಡುವ ಗೈಡುಗಳ ಕೊರತೆ ಇರುವುದು  , ಗೈದುಗಳು ಇದ್ದರೂ ಅವರಿಗೆ ಇತಿಹಾಸದ  ಅರಿವಿಲ್ಲದೆ ತಪ್ಪು ತಿಳುವಳಿಕೆ ಮೂಡಿ  ಇಂತಹ ಅವಗಡಗಳಿಗೆ ಕಾರಣವಾಗಿದ್ದು. ಈ ಕೊರತೆ ನೀಗಿಸಬೇಕಾಗಿದೆ.  ನೀವು ಮುಂದೊಮ್ಮೆ ಇಲ್ಲಿಗೆ ಬಂದಾಗ ಈ ಮಾಹಿತಿಯನ್ನು ಗೈಡುಗಳಲ್ಲಿ ಪರೀಕ್ಷಿಸಿನೋಡಿ. ಮುಂದಿನ ಸಂಚಿಕೆಯಲ್ಲಿ  ಮತ್ತೊಂದು ಸ್ಮಾರಕದ ಬಗ್ಗೆ ಮಾಹಿತಿ ನೀಡುವೆ  ವಂದನೆಗಳು.