ಗುರುವಾರ, ನವೆಂಬರ್ 17, 2011

ಟಿಪ್ಪು ಮಡಿದದ್ದು ಎಲ್ಲಿ ??? ದೇಹಸಿಕ್ಕಿದ್ದು ಎಲ್ಲಿ ??? ಈ ಎರಡು ಸ್ಮಾರಕಗಳ ಗತ ಇತಿಹಾಸದಲ್ಲಿ !!!





ಕಳೆದ ಹಲವಾರು ಸಂಚಿಕೆಗಳಿಂದ ನೀವು ಶ್ರೀರಂಗಪಟ್ಟಣದ ಹಲವಾರು ಸ್ಮಾರಕಗಳ ಪರಿಚಯ ಮಾಡಿಕೊಂಡಿದ್ದೀರಿ , ಬನ್ನಿ ಈ ಸಂಚಿಕೆಯಲ್ಲಿ ಎರಡು ಶತಮಾನಗಳ ಹಿಂದಿನ ಘಟನೆಯ ಎರಡು ಪ್ರಮುಖ ಸ್ಮಾರಕಗಳ ಪರಿಚಯ ಮಾಡಿಕೊಳ್ಳೋಣ . ಶ್ರೀ ಗಂಗಾಧರೇಶ್ವರ ಸ್ವಾಮೀ ದೇವಾಲಯದ ಉತ್ತರಕ್ಕೆ ಸಮೀಪದಲ್ಲಿ ನಿಮಗೆ "ವಾಟರ್ ಗೇಟ್" ಎಂದು ಇಂಗ್ಲೀಷಿನಲ್ಲಿ ನಾಮ ಫಲಕ ಹೊತ್ತ ಒಂದು ಕಮಾನು ಸುರಂಗ ಕಾಣಿಸುತ್ತದೆ.ಅದರ ಸಮೀಪ ಹೋದರೆನಿಮಗೆ ಒಂದು ಕಾಲು ಹಾದಿ ನಿಮ್ಮನ್ನು ಕಾವೇರಿ ನದಿಯೆಡೆಗೆ ಕರೆದೊಯ್ಯುತ್ತದೆ . ಬಹಳ ಹಿಂದೆ ಅರಮನೆಯ ಪ್ರಮುಖರು ಕಾವೇರಿ ನದಿಗೆ ತೆರಳಲು ಈ ಸುರಂಗ ಬಾಗಿಲನ್ನು ಉಪಯೋಗಿಸುತ್ತಿದ್ದರೆಂದು ಹೇಳಲಾಗುತ್ತದೆ.

1799 ರ ಮೇ ೪ ರಂದು ನಡೆದ ಅಂತಿಮ ಯುದ್ದದಲ್ಲಿ ಬ್ರಿಟೀಷರೊಡನೆ ಕಾದಾಡಲು ಹೋದ ಟಿಪ್ಪೂ ಸುಲ್ತಾನನು ಈ ಪ್ರದೇಶದ ವಾಟರ್ ಗೇಟ್ ಹೊಕ್ಕನೆಂದೂ ಕಾದಾಟದ ಒಂದು ಘಟ್ಟದಲ್ಲಿ ಕೆಲವು ಕುತಂತ್ರಿಗಳ ಸಂಚಿನಿಂದ ಇಲ್ಲಿನ ಬಾಗಿಲನ್ನು ಮುಚ್ಚಲಾಯಿತೆಂದು ಇದರಿಂದಾಗಿ ಟಿಪ್ಪೂ ಸುಲ್ತಾನ್ ವೈರಿಗಳ ಹೊಡೆತಕ್ಕೆ ಸಿಕ್ಕಿ ವೀರ ಮರಣ ಹೊಂದಿದನೆಂದೂ ತಿಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಹಲವಾರು ದಾಖಲೆಗಳು ಹೇಳಿದರೂ ಮತ್ತಷ್ಟು ದಾಖಲೆಗಳು ಟಿಪ್ಪು ಸುಲ್ತಾನ್ ಇಲ್ಲಿ ಮರಣ ಹೊಂದಲಿಲ್ಲವೆಂದೂ ಈ ಸ್ಮಾರಕ ದ ಪೂರ್ವಕ್ಕೆ ೧೦೦ ಯಾರ್ಡ್ ನಲ್ಲಿ ಸ್ತಾಪಿಸಲಾಗಿರುವ ಸ್ಮಾರಕವೇ ನಿಜವಾದ ನಿಖರವಾದ ಸ್ಮಾರಕವೆಂದು ಹೇಳುತ್ತಿವೆ.ಆದರೆ ಅತೀ ಹೆಚ್ಚಿನ ದಾಖಲೆಗಳು ಪ್ರತಿ ಪಾದಿಸುತ್ತಿರುವುದು, ಗೆಜೆಟ್ ಗಳಲ್ಲಿನ ಮಾಹಿತಿಗಳು ಹಾಗು ಅಂತರ್ಜಾಲದಲ್ಲಿ ಸಿಗುತ್ತಿರುವ ಮಾಹಿತಿಗಳು ಟಿಪ್ಪೂ ಸುಲ್ತಾನ್ ಮರಣ ಹೊಂದಿದ ಸ್ಥಳವೆಂದು "ವಾಟರ್ ಗೇಟ್" ನತ್ತ ಬೆರಳು ತೋರುತ್ತಿವೆ. ಇದರಲ್ಲಿ ಸತ್ಯವೇನೆಂಬ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ , ಸಂಶೋದನೆ ಅಗತ್ಯ ವಿದೆ. ಆದರೂ ಈ ಎರಡು ಸ್ಮಾರಕಗಳ ಸಮೀಪ ಎಲ್ಲೋ ಒಂದು ಕಡೆ ಟಿಪ್ಪೂ ವೀರಮರಣ ಹೊಂದಿದನೆಂದು ಬಾವಿಸಬಹುದು.ಮೈಸೂರಿನ ಇತಿಹಾಸದ ಒಬ್ಬ ಪ್ರಮುಖ ಪಾತ್ರದಾರಿ , ಶ್ರೀ ರಂಗಪಟ್ಟಣದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿದ ಟಿಪ್ಪೂ ಸುಲ್ತಾನ ಇಲ್ಲಿ ತನ್ನ ಅಂತಿಮ ಪಯಣ ಮುಗಿಸಿದ್ದ!!!!, ಆದಕಾರಣ ಈ ಸ್ಮಾರಕಗಳು ಐತಿಹಾಸಿಕ ದೃಷ್ಟಿಯಿಂದ ಪ್ರಮುಖವಾಗಿವೆ. ಟಿಪೂ ಸುಲ್ತಾನನ ದೇಹ ಸಿಕ್ಕಿದ ಜಾಗವೆಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದ್ದು ಅದರ ಚಿತ್ರಗಳು ಇಲ್ಲಿವೆ ಈ ಸಂಚಿಕೆಯಲ್ಲಿ ಎರಡು ಸ್ಮಾರಕಗಳನ್ನು ಪರಿಚಯ ಮಾಡಿದ್ದು ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ ಅಲ್ಲಿಯವರೆಗೆ ಶುಭ ಸಮಯ.

ಮಂಗಳವಾರ, ನವೆಂಬರ್ 1, 2011

ಶ್ರೀ ರಂಗ ಪಟ್ಟಣದಲ್ಲಿ ಶ್ರೀಗಂಧದ ಶೇಖರಣೆಗೆ ಒಂದು ದಾಸ್ತಾನು ಕೋಠಿ ಇತ್ತು!!! ಅದೇ ಸ್ವಾಮೀ ಸಂದಿಲ್ ಕೋಟಿ!!!!!


ಗತ ಕಾಲದ  ವೈಭವ ಕಳೆದುಕೊಂಡ  ಶ್ರೀ ಗಂಧ ದಾಸ್ತಾನು ಕೋಠಿ

ಬಹಳ ದಿನಗಳ ನಂತರ ಮತ್ತೆ ನನ್ನನ್ನು  ಇಲ್ಲಿಗೆ ಕರೆತಂದ  ವಿಚಾರ ಇದು  . ಹಿಂದಿನ ಸಂಚಿಕೆಯಲ್ಲಿ ನಿಮಗೆ ಗಂಗಾಧರೇಶ್ವರ ಸ್ವಾಮೀ ದೇವಾಲಯ ಪರಿಚಯ ಮಾಡಿಕೊಟ್ಟಿದ್ದೆ.   ಅದಕ್ಕೆ ಸನಿಹದಲ್ಲೇ  ಕಂಡುಬರುವುದು ಈ ಸ್ಮಾರಕ . ಹೈದರ್ ಅಲಿ  ಹಾಗು ಟಿಪ್ಪೂ ಸುಲ್ತಾನನ ಕಾಲದ್ದೆಂದು ಹೇಳಲಾಗುವ ಈ ಸ್ಮಾರಕ  ಶ್ರೀ ರಂಗ ಪಟ್ಟಣದ ಪ್ರಮುಖ ಆರ್ಥಿಕ ವಹಿವಾಟಿನ ಕೇಂದ್ರವಾಗಿತ್ತು.  ಹೌದು ಹಿಂದೆ ಆಳ್ವಿಕೆ ನಡೆಸಿದ್ದ ಬಹುಷಃ ಎಲ್ಲಾ  ರಾಜ್ಯಗಳ ರಾಜರು ತಮ್ಮ ರಾಜ್ಯದ ಆರ್ಥಿಕ ಮಟ್ಟ ಹೆಚ್ಚಿಸಲು  ಅಮೂಲ್ಯವಾದ ಉತ್ಪನ್ನಗಳ ರಫ್ತು ಮಾಡಿ ತಮ್ಮ ಖಜಾನೆ ತುಂಬಿಸಿ ಕೊಳ್ಳುತ್ತಿದ್ದರು . ಅಂತಹ ಒಂದು ಪ್ರಮುಖ ದಾಸ್ತಾನು ಮಳಿಗೆ ಇದು . ದಕ್ಷಿಣ ಕರ್ನಾಟಕ ಪ್ರಾಂತ ಶ್ರೀ ಗಂಧದ  ಮರಗಳಿಗೆ ಹೆಸರುವಾಸಿ. ಈ ಮರಗಳ ಉತ್ಪನ್ನ ಮಾರಾಟ ಮಾಡಿ ಅಂದು ಅತೀ ಹೆಚ್ಚು ಲಾಭ ಮಾಡಿಕೊಂಡವರು ಹೈದರ್ ಹಾಗು ಟಿಪ್ಪೂ ಸುಲ್ತಾನ್.  ಅಂದಿನ ಕಾಲದಲ್ಲಿ ಶ್ರೀಗಂಧ ಮರದ ಮಾರಾಟ ಅತೀ ಲಾಭ ಕೊಡುವ ಆರ್ಥಿಕ  ವಹಿವಾಟು ಆಗಿತ್ತೆಂದು     ತೋರುತ್ತದೆ.ಇಂತಹ ಅಮೂಲ್ಯ ಶ್ರೀ ಗಂಧದ ಮರಗಳನ್ನು ,ಹಾಗು ಉತ್ಪನ್ನಗಳನ್ನು ಸಂರಕ್ಷಿಸಲು  ಹಾಗು ವಹಿವಾಟು ನಡೆಸಲು ಇದ್ದ ಕೇಂದ್ರವೇ ಈ  "ಸೆಂದಿಲ್ ಕೋಠಿ "
ಅಂದಿನ ವೈಭವದ ಸಂದಲ್  ಕೋಟಿ[ ಚಿತ್ರ ಕೃಪೆ ಅಂತರ್ಜಾಲ]

  ಅಂದು ಈ ಕೋಠಿಯ ವೈಭವ ತೋರುವ ಅಪರೂಪದ ಹಳೆಯ ಚಿತ್ರ  ಇಲ್ಲಿದೆ ನೋಡಿ  ಅದರ ರಕ್ಷಣೆಗೆ ನಿಂತ ಸಿಬ್ಬಂಧಿಗಳನ್ನೂ ನೀವು ಚಿತ್ರದಲ್ಲಿ ಕಾಣಬಹುದು. ಈ ಚಿತ್ರ ಸುಮಾರು ಒಂದು ನೂರ ಇಪ್ಪತ್ತು ವರ್ಷಗಳ ಹಿಂದೆ ತೆಗೆಯಲಾಗಿದ್ದು  ಇತಿಹಾಸದ ವೈಭವದ ದಿನಗಳನ್ನು ಜ್ಞಾಪಿಸುತ್ತದೆ. ಸ್ವಲ್ಪ ಗಮನಿಸಿ  ಕೋಠಿಯ  ಪ್ರವೇಶ ದ್ವಾರದಲ್ಲಿ  ಶ್ರೀ ಗಂಧದ ಮರದ ತುಂಡುಗಳಿಂದ ಕಲಾತ್ಮಕವಾಗಿ  ಸಿಂಗರಿಸಿರುವುದನ್ನು ನಾವು ಕಾಣಬಹುದು .ಇಷ್ಟೆಲ್ಲಾ ಮೆರೆದಾಡಿದ  ಈ ಭವ್ಯ ಪ್ರದೇಶದಲ್ಲಿ  ಮೈಸೂರಿನ ಅಂತಿಮ ಯುದ್ದದ ನಂತರ ಇದರ ವಹಿವಾಟು ಸ್ಥಗಿತಗೊಂಡು ಆನಂತರದ ದಿನಗಳಲ್ಲಿ  ಸ್ವಲ್ಪ ಕಾಲ ಪುರಸಭೆ ಕಚೇರಿಯಾಗಿ  ನಂತರ ಈಗ "ಕುಸ್ತಿ"  ಅಖಾಡವಾಗಿ  ನಿಂತಿದೆ.
ಹಾಲಿ ಕುಸ್ತಿ ಅಖಾಡ ಹೀಗಿದೆ 
ಇತಿಹಾಸದ ಅಣಕ ವೆಂದರೆ  ಇದೆ ಅಲ್ಲವೇ?? ಗತಕಾಲದ ನೆನಪಿನಲ್ಲಿ  ಇಲ್ಲಿಂದ ವಿದೇಶಗಳಿಗೆ  ಕನ್ನಡ ಸೀಮೆಯ ಶ್ರೀ ಗಂಧ ರಫ್ತಾಯಿತೆ  ಎಂಬ ಪ್ರಶ್ನೆಗೆ  ಹಾಲಿ ಉತ್ತರವಿಲ್ಲ. ಹಾಗು ಈ ಸ್ಮಾರಕ  ಹೇಗಿತ್ತು ಎಂಬ ಕಲ್ಪನೆ ಇಂದಿನ ಪೀಳಿಗೆಗೆ ಸಿಗುತ್ತಿಲ್ಲ. ಇತಿಹಾಸ ಕೆಣಕಿದರೂ ಹಲವಾರು ಸ್ಮಾರಖಗಳ  ಬಗ್ಗೆ ಮಾಹಿತಿ ಸಿಗುವುದು ಕಷ್ಟವಾಗಿದೆ .ಯಾಕೆಂದ್ರೆ ನಿಜವಾದ ಮಾಹಿತಿ ಕಾಲಗರ್ಭದ ಒಳಗೆ  ಸಿಗಲಾರದಷ್ಟು  ಆಳಕ್ಕೆ ಸೇರಿಬಿಟ್ಟಿದೆ. ಈ ಸ್ಮಾರಕ   ಬಗ್ಗೆ ನನ್ನ ಬಳಿ ಇರುವುದು ಇಷ್ಟೇ ಮುಂದಿನ ಸಾರಿ ಮತ್ತೊಂದು ಸ್ಮಾರಕ  ಪರಿಚಯ ಮಾಡಿ ಕೊಳ್ಳೋಣ. ಅಲ್ಲಿಯವರೆಗೆ  ಶುಭ ಸಮಯ.[