ಭಾನುವಾರ, ಜನವರಿ 8, 2012

ಜುಮ್ಮಾ ಮಸೀದಿ ಒಳಗೆ ಅಡಗಿದೆ ಸೂರ್ಯ ಕಿರಣದ ಗಡಿಯಾರ !!!


ಜಮ್ಮಾ ಮಸೀದಿ

ಶ್ರೀ ರಂಗ ಪಟ್ಟಣದ  ಹಲವಾರು ಸ್ಮಾರಕಗಳ ಪರಿಚಯ ನಡಿಗೆಯಲ್ಲಿ  ಜೊತೆಯಾಗಿ ಬಂದಿದ್ದೀರಿ. ನಿಮಗೆ ೨೦೧೨ ರ ಶುಭಾಶಯಗಳು. ಬನ್ನಿ ಕಳೆದ  ಸಂಚಿಕೆಯಲ್ಲಿ  "ಇನ್ಮಾನ್ಸ್ ದಂಜನ್" ಜೈಲಿನ ಹೊರಗೆ ಬಂದರೆ ನಿಮಗೆ ಕಾಣ ಸಿಗುವುದೇ  ಹಳದಿ ಬಣ್ಣದ ಕಲಾ ವೈವಿಧ್ಯದ  ಈ "ಜಮ್ಮಾ ಮಸೀದಿ"    ನನಗೆ ದೊರೆತ 1897  ರ "SERINGAPATAM
AND ITS VICINITY " ಎಂಬ ದಾಖಲೆಯಂತೆ .                                                                                   OnIGIN OF l\IASZID-AULAJI OR THE GREAT MOSQUE.,
 Tippu, (then a boy of 7 years of age) alan
with H.ydel' Airs zenana in a house near the Ganja
gate, fl~cing a Hindu temple dedicated to Anjanaya;
Tippu ll.)OU to play with some Hindu boys in the spaci·
ous compound of tJJat temple; while ~() engaged it hap·
pened one day that a fakir passing tl':lt way and seeing
'l'ippu, adurcssec1 him as follows; "Oll! fortlmatp "
when thon art made king of this country, wami
temple to the grouucl and erect a mosque in it'
15and future generations will honour thee, and it wili
litand a memorial of thee." Tippu with a smiling face
said that whenever by his blessings he should be marle
king he would do so. And wben '1'ippu did become
king, he pulled down the temple and a mosque was
raisl"d on the site in 1790.





ಮಸೀದಿ ಪ್ರವೇಶಕ್ಕೆ ಎಲ್ಲರಿಗೂ ಅವಕಾಶವಿದೆ

ಹೌದು ಟಿಪ್ಪೂ ಚಿಕ್ಕವನಿದ್ದಾಗ  ಫಕೀರರೊಬ್ಬರು  ನುಡಿದ ಭವಿಷ್ಯದಂತೆ ಟಿಪ್ಪೂ ಶ್ರೀರಂಗ ಪಟ್ಟಣದ  ಅಧಿಪತಿ ಯಾಗುತ್ತಾನೆ , ಆ ಫಕೀರರ ಕೋರಿಕೆಯಂತೆ ಈ ಮಸೀದಿಯನ್ನು ನಿರ್ಮಿಸಿದನೆಂದು ಹೇಳಲಾಗುತ್ತಿದೆ.ಮೇಲಿನ ದಾಖಲೆ ಅದನ್ನು ಸಮರ್ಥಿಸುತ್ತದೆ.ಅದೇ ರೀತಿ   "ಮಂಡ್ಯ ಜಿಲ್ಲಾ ಗೆಜೆತೀರ್ "   ನಲ್ಲಿಯೂ ಸಹ ಮಸೀದಿ ಬಗ್ಗೆ ಇದೆ  ಹೋಲಿಕೆಯ  ಮಾಹಿತಿ ಒದಗಿಸುತ್ತಿದೆ.ಏನೇ ಇರಲಿ ಮಸೀದಿ ಯೊಳಗೆ ಹೊಕ್ಕರೆ ನಿಮಗೆ   ಸುಂದರ ಕಲೆಯ ಅನಾವರಣ ಆಗುವುದು ನಿಜ ."ಇಂಡೋ ಸಾರ್ಸೆನಿಕ್ " ಶೈಲಿಯಲ್ಲಿ ಅಲಂಕೃತಗೊಂಡ ಈ ಮಸೀದಿಯಲ್ಲಿ ಎರಡು ಸುಂದರ ಮಿನಾರುಗಳು , ಗೋಡೆಯಲ್ಲಿ ಪರ್ಷಿಯನ್ ಭಾಷೆಯಲ್ಲಿ ಬರೆದ "ಖುರಾನ್ " ವಾಕ್ಯಗಳು  ನಿಮಗೆ ಕಾಣಸಿಗುತ್ತವೆ.
ಅಭ್ಯಾಸ ನಿರತ ಮಕ್ಕಳು.

ಮಸೀದಿ ಪ್ರವೇಶ ದ್ವಾರ ಹೊಕ್ಕಿದ ಕೂಡಲೇ ನಿಮಗೆ ಅಲ್ಲಿ ಮಕ್ಕಳು ಖುರಾನ್ ಅಧ್ಯಯನ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ , ನಂತರ ಪಕ್ಕದಲ್ಲಿ ಪ್ರಾಥನೆಗೆ ಮೊದಲು ಶುಚಿಯಾಗಲು ನೀರು ಒದಗಿಸುತ್ತಿದ್ದ ಒಂದು ಕೊಳ ಕಾಣಿಸುತ್ತದೆ.
ಮಸೀದಿಯೊಳಗೆ ಒಂದು ದ್ವಿಶತಮಾನ ದಾಟಿದ ಕೊಳ





ಮೊದಲು ಇಲ್ಲಿಗೆ ಕಾವೇರಿ ನದಿಯಿಂದ ನೀರು ಬರಲು ನೆಲಮಾಳಿಗೆಯ ಕೊಳವೆ ಇದ್ದು  ಯುದ್ದ ಕಾಲದಲ್ಲಿ ಅದು ನಾಶವಾದ ಕಾರಣ ಒಂದು ಬಾವಿ ತೆಗೆಯಲಾಯಿತೆಂದು ಹೇಳುತ್ತಾರೆ. ಇದಕ್ಕೆ ಸ್ಪಷ್ಟ ದಾಖಲೆಗಳ ಮಾಹಿತಿ ಇಲ್ಲ.  ನಂತರ ಮೆಟ್ಟಿಲು ಹತ್ತಿ ಮೇಲೆ ಹೋದರೆ ನಿಮಗೆ ಕಾಣ ಸಿಗುವುದು  ಒಂದು  ವಿಶಾಲವಾದ  ಹಜಾರ  ಅಲ್ಲಿಂದ ನಿಮಗೆ ಕಾಣ ಸಿಗುವುದು ಪ್ರಾರ್ಥನಾ ಮಂದಿರ .
ಮಸೀದಿಯಲ್ಲಿನ ಪ್ರಾರ್ಥನಾ  ಸ್ಥಳ

ಪ್ರಾರ್ಥನಾ  ಮಂದಿರ ದಲ್ಲಿ ನಿಮಗೆ ಖುರಾನ್  ವಾಕ್ಯಗಳ ದರ್ಶನ ಆಗುತ್ತದೆ. ಬನ್ನಿ ಅಲ್ಲೇ ಸ್ವಲ್ಪ ಸುತ್ತಾಡೋಣ  , ಮೊದಲು ಚಿಕ್ಕವನಿದ್ದಾಗ ಮಿನಾರುಗಳ ಒಳಗಡೆ ಇರುವ ಮೆಟ್ಟಿಲುಗಳ ಹತ್ತಿ  ಮೈಸೂರು ನೋಡುತ್ತಿದ್ದ  ನೆನಪು ಕಾಡುತ್ತದೆ.
 ಎತ್ತರದ ಮಿನಾರು
ಬಹುಷಃ  ಮಿನಾರುಗಳ ಮೂಲಕ ಸುತ್ತಲೂ ಕಾಣುತಿದ್ದ  ಹಲವಾರು ಮೈಲಿಗಳ ನೋಟದಲ್ಲಿ  ಶ್ರೀ ರಂಗ ಪಟ್ಟಣದ ಶತ್ರುಗಳ ಚಲನ ವಲನ ತಿಳಿಯುತ್ತಿದ್ದ  ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬನ್ನಿ ಇಲ್ಲೇ ಇದೆ ಮತ್ತೊಂದು ಕೌತುಕ  ಹೌದು ಸರ್ ಇಲ್ಲೇ ಇದೆ ನೋಡಿ ಸೂರ್ಯ ಕಿರಣದ ಗಡಿಯಾರ , ಇದರ ವಿಶೇಷ ಏನೂ ಅಂತೀರಾ ಬನ್ನಿ....
ವಿಸ್ಮಯ ಸೂರ್ಯ ಗಡಿಯಾರ [ sun dial ]

ಕಲ್ಲಿನಲ್ಲಿ ಅಂದಿನ  ಗಣಿತ ಲೆಕ್ಕಾಚಾರದಂತೆ ಎಂಟು ದಿಕ್ಕುಗಳನ್ನು ಗುರುತಿಸಿ, ಅದನ್ನು ಪರ್ಷಿಯನ್ ಭಾಷೆಯಿಂದ ಎಂಟು ದಿಕ್ಕುಗಳನ್ನು  ಕಲ್ಲಿನಲ್ಲಿ ನಮೂದಿಸಲಾಗಿದೆ. ವೃತ್ತಾಕಾರದ ಕಲ್ಲಿನ ಕೇಂದ್ರ [ center ] ಭಾಗದಲ್ಲಿ ಒಂದು ಗುಳಿ ಮಾಡಿದ್ದು ಅದರಲ್ಲಿ  ಒಂದು ಕಡ್ಡಿಯಾಕಾರದ ವಸ್ತುವನ್ನು ಇಡಲಾಗುತ್ತಿತ್ತು. ಆ ಗುಳಿಯ ಸುತ್ತಲೂ  ಲಂಬವಾಗಿ ಗೆರೆಗಳ ಮೂಲಕ ವರ್ತುಲಾಕಾರದ ಕಲ್ಲನ್ನು ಎಂಟು ಭಾಗ ಮಾಡಲಾಗಿದೆ ಗುಳಿಯ ಸುತ್ತಲು ವೃತ್ತಗಳನ್ನು ರಚಿಸಲಾಗಿದ್ದು ಅದರಲ್ಲಿ ಇಪ್ಪತ್ತು ವೃತ್ತದ  ಮನೆಗಳಿವೆ , ಸೂರ್ಯ ಕಿರಣ ಗಡಿಯಾರದ ಕಡ್ಡಿಯಾಕಾರದ ವಸ್ತುವಿನ ಮೇಲೆ ಬಿದ್ದು ಮೂಡುವ ನೆರಳಿನ ಚಲನೆಯ ಆಧಾರದ ಮೇಲೆ ಇಲ್ಲಿ  ವರ್ಷದ ತಿಂಗಳು, ದಿನಗಳು ಹಾಗೂ ದಿನದ ವೇಳೆಯನ್ನು ತಿಳಿಯಲಾಗುತ್ತಿತ್ತೆಂದು ಕಂಡುಬರುತ್ತದೆ. ಬಹಳಷ್ಟು ದೇಶ ವಿದೇಶದ  ಜನ ಇಲ್ಲಿಗೆ ಬಂದರೂ ಈ ಗಡಿಯಾರವನ್ನು ಗಮನಿಸದೆ ಹೋಗುತ್ತಾರೆ. ಇಂತಹ ಗಡಿಯಾರ ಉತ್ತರ ಭಾರತದ ಜೈಪುರದಲ್ಲಿನ "ಜಂತರ್ ಮಂತರ್"  ನಷ್ಟೇ ಪ್ರಾಮುಖ್ಯತೆ ಹೊಂದಿದೆ , ಆದರೆ ದುರಂತ ಗುರುತಿಸುವಲ್ಲಿ ನಾವು ಎಡವಿದ್ದೇವೆ . ಮುಂದೊಮ್ಮೆ ನೀವು ಬಂದಾಗ ಇಲ್ಲಿಗೆ ಭೇಟಿ ಕೊಡಿ.ವಿಜ್ಞಾನದ ಕೌತುಕ ನೋಡಿ ಆನಂದಿಸಿ.ಮತ್ತೊಂದು ವಿಚಾರ ಈ ಮಸೀದಿ ನೋಡಲು ಎಲ್ಲಾ ಸಾರ್ವಜನಿಕರಿಗೂ  ಮುಕ್ತ ಅವಕಾಶವಿದೆ. ನಾನು ಅಲ್ಲಿಗೆ ಹೋದಾಗ ಅಯ್ಯಪ್ಪ ಸ್ವಾಮೀ ಭಕ್ತರು ಮಸೀದಿಗೆ ಭೇಟಿ ಕೊಟ್ಟು ಮಾಹಿತಿ ತಿಳಿಯುತ್ತಿದ್ದರು.
ಇಂಡೋ ಸಾರ್ಸೆನಿಕ್ ಶೈಲಿಯ ಕಲಾವಂತಿಕೆಯ ಮಿನಾರು ಗೋಪುರ.
ಐತಿಹಾಸಿಕ ಘಟನೆಗೆ ನಾನೂ ಸಾಕ್ಷಿ 
ಹಲವಾರು  ಐತಿಹಾಸಿಕ  ಘಟನೆಗಳಿಗೆ  ಸಾಕ್ಷಿಯಾಗಿರುವ   ಈಸ್ಮಾರಕವನ್ನು ಇತಿಹಾಸದ ದೃಷ್ಟಿಯಿಂದ ಮಾತ್ರ ನೋಡೋಣ ಬನ್ನಿ . ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ.ಅಲ್ಲಿಯವರೆಗೆ ಎಲ್ಲರಿಗೂ  ಶುಭ ಸಮಯ.

6 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲಣ್ಣ..

ನಿಮಗೂ..
ನಿಮ್ಮ ಹುಡುಕಾಟಕ್ಕೂ... ಇತಿಹಾಸದ ಪ್ರೀತಿಗೂ ಪ್ರೀತಿಯ ಸಲಾಮ್ !!

ಆಗಿನ ಕಾಲದಲ್ಲಿ ನಮ್ಮವರು ಎಷ್ಟು ಮುಂದುವರೆದಿದ್ದರು ಅಲ್ವಾ?

ಮುಂದುವರೆಯಲಿ ನಿಮ್ಮ ಹುಡುಕಾಟ... ಜೈ ಹೋ !!

balasubramanya ಹೇಳಿದರು...

ಪ್ರಕಾಶಣ್ಣ ನಿಮ್ಮ ಮಾತು ನಿಜ , ಇತಿಹಾಸದ ಹಿಂದಿನ ವಿಜ್ಞಾನವನ್ನು ಅರಿಯಲು ನಾವು ವಿಫಲರಾಗಿದ್ದೇವೆ. ಹ ಹ ಹ ಹುಡುಕಾಟ ಮುಂದುವರೆದಿದೆ. ಅಗೆದಷ್ಟೂ ಹೊಸ ವಿಚಾರಗಳ ಮಾಹಿತಿ ದೊರೆಯುತ್ತಿದೆ.

ಜಲನಯನ ಹೇಳಿದರು...

ಬಾಲು ಮಹತ್ವದ ಮಾಹಿತಿ, ಅದರಲ್ಲೂ ಸೂರ್ಯ ಗಡಿಯಾರದ ವಿವರ. ನಿಮ್ಮ ಹುಡುಕಾಟ ಮತ್ತು ನಮಗೆಲ್ಲಾ ಮಾಹಿತಿಯ ಉಣಬಡಿಕೆ ನಡೆಯುತ್ತಿರಲಿ...
ಧನ್ಯವಾದ

balasubramanya ಹೇಳಿದರು...

@ ಜಲಾನಯನ :-) ಅಜಾದ್ ಸರ್ ಲೇಖನ ಮೆಚ್ಚಿದ ತಮ್ಮ ಮಾತುಗಳಿಗೆ ವಂದನೆಗಳು.ಪ್ರೋತ್ಸಾಹ ಹೀಗೆ ಇರಲಿ.

Badarinath Palavalli ಹೇಳಿದರು...

ಜಮ್ಮಾ ಮಸೀದಿ ಒಳಗಿನ ಸೂರ್ಯ ಗಡಿಯಾರ ನಿಮ್ಮ ಸಂಶೋಧನಾತ್ಮಕ ಮತ್ತು ಚಿಕಿತ್ಸಕ ವಿಶ್ಲೇಷಣೆಗೆ ತಾಜಾ ಉದಾಹರಣೆ.

ಮತ್ತೊಮ್ಮೆ ಉತ್ತಮ ಚಿತ್ರಗಳಿಂದ ಮನಗೆದ್ದಿದ್ದೀರಿ.

೨೦೧೨ ನಿಮಗೆ ಎಲ್ಲ ಶುಭತರಲಿ.

balasubramanya ಹೇಳಿದರು...

@ ಬದರಿನಾಥ್ ಪಲವಳ್ಳಿ:-) ಪ್ರೋತ್ಸಾಹ ಪೂರ್ವಕ ಅನಿಸಿಕೆಗೆ ಜೈ ಹೋ ಸರ್