ಗುರುವಾರ, ನವೆಂಬರ್ 17, 2011

ಟಿಪ್ಪು ಮಡಿದದ್ದು ಎಲ್ಲಿ ??? ದೇಹಸಿಕ್ಕಿದ್ದು ಎಲ್ಲಿ ??? ಈ ಎರಡು ಸ್ಮಾರಕಗಳ ಗತ ಇತಿಹಾಸದಲ್ಲಿ !!!





ಕಳೆದ ಹಲವಾರು ಸಂಚಿಕೆಗಳಿಂದ ನೀವು ಶ್ರೀರಂಗಪಟ್ಟಣದ ಹಲವಾರು ಸ್ಮಾರಕಗಳ ಪರಿಚಯ ಮಾಡಿಕೊಂಡಿದ್ದೀರಿ , ಬನ್ನಿ ಈ ಸಂಚಿಕೆಯಲ್ಲಿ ಎರಡು ಶತಮಾನಗಳ ಹಿಂದಿನ ಘಟನೆಯ ಎರಡು ಪ್ರಮುಖ ಸ್ಮಾರಕಗಳ ಪರಿಚಯ ಮಾಡಿಕೊಳ್ಳೋಣ . ಶ್ರೀ ಗಂಗಾಧರೇಶ್ವರ ಸ್ವಾಮೀ ದೇವಾಲಯದ ಉತ್ತರಕ್ಕೆ ಸಮೀಪದಲ್ಲಿ ನಿಮಗೆ "ವಾಟರ್ ಗೇಟ್" ಎಂದು ಇಂಗ್ಲೀಷಿನಲ್ಲಿ ನಾಮ ಫಲಕ ಹೊತ್ತ ಒಂದು ಕಮಾನು ಸುರಂಗ ಕಾಣಿಸುತ್ತದೆ.ಅದರ ಸಮೀಪ ಹೋದರೆನಿಮಗೆ ಒಂದು ಕಾಲು ಹಾದಿ ನಿಮ್ಮನ್ನು ಕಾವೇರಿ ನದಿಯೆಡೆಗೆ ಕರೆದೊಯ್ಯುತ್ತದೆ . ಬಹಳ ಹಿಂದೆ ಅರಮನೆಯ ಪ್ರಮುಖರು ಕಾವೇರಿ ನದಿಗೆ ತೆರಳಲು ಈ ಸುರಂಗ ಬಾಗಿಲನ್ನು ಉಪಯೋಗಿಸುತ್ತಿದ್ದರೆಂದು ಹೇಳಲಾಗುತ್ತದೆ.

1799 ರ ಮೇ ೪ ರಂದು ನಡೆದ ಅಂತಿಮ ಯುದ್ದದಲ್ಲಿ ಬ್ರಿಟೀಷರೊಡನೆ ಕಾದಾಡಲು ಹೋದ ಟಿಪ್ಪೂ ಸುಲ್ತಾನನು ಈ ಪ್ರದೇಶದ ವಾಟರ್ ಗೇಟ್ ಹೊಕ್ಕನೆಂದೂ ಕಾದಾಟದ ಒಂದು ಘಟ್ಟದಲ್ಲಿ ಕೆಲವು ಕುತಂತ್ರಿಗಳ ಸಂಚಿನಿಂದ ಇಲ್ಲಿನ ಬಾಗಿಲನ್ನು ಮುಚ್ಚಲಾಯಿತೆಂದು ಇದರಿಂದಾಗಿ ಟಿಪ್ಪೂ ಸುಲ್ತಾನ್ ವೈರಿಗಳ ಹೊಡೆತಕ್ಕೆ ಸಿಕ್ಕಿ ವೀರ ಮರಣ ಹೊಂದಿದನೆಂದೂ ತಿಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಹಲವಾರು ದಾಖಲೆಗಳು ಹೇಳಿದರೂ ಮತ್ತಷ್ಟು ದಾಖಲೆಗಳು ಟಿಪ್ಪು ಸುಲ್ತಾನ್ ಇಲ್ಲಿ ಮರಣ ಹೊಂದಲಿಲ್ಲವೆಂದೂ ಈ ಸ್ಮಾರಕ ದ ಪೂರ್ವಕ್ಕೆ ೧೦೦ ಯಾರ್ಡ್ ನಲ್ಲಿ ಸ್ತಾಪಿಸಲಾಗಿರುವ ಸ್ಮಾರಕವೇ ನಿಜವಾದ ನಿಖರವಾದ ಸ್ಮಾರಕವೆಂದು ಹೇಳುತ್ತಿವೆ.ಆದರೆ ಅತೀ ಹೆಚ್ಚಿನ ದಾಖಲೆಗಳು ಪ್ರತಿ ಪಾದಿಸುತ್ತಿರುವುದು, ಗೆಜೆಟ್ ಗಳಲ್ಲಿನ ಮಾಹಿತಿಗಳು ಹಾಗು ಅಂತರ್ಜಾಲದಲ್ಲಿ ಸಿಗುತ್ತಿರುವ ಮಾಹಿತಿಗಳು ಟಿಪ್ಪೂ ಸುಲ್ತಾನ್ ಮರಣ ಹೊಂದಿದ ಸ್ಥಳವೆಂದು "ವಾಟರ್ ಗೇಟ್" ನತ್ತ ಬೆರಳು ತೋರುತ್ತಿವೆ. ಇದರಲ್ಲಿ ಸತ್ಯವೇನೆಂಬ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ , ಸಂಶೋದನೆ ಅಗತ್ಯ ವಿದೆ. ಆದರೂ ಈ ಎರಡು ಸ್ಮಾರಕಗಳ ಸಮೀಪ ಎಲ್ಲೋ ಒಂದು ಕಡೆ ಟಿಪ್ಪೂ ವೀರಮರಣ ಹೊಂದಿದನೆಂದು ಬಾವಿಸಬಹುದು.ಮೈಸೂರಿನ ಇತಿಹಾಸದ ಒಬ್ಬ ಪ್ರಮುಖ ಪಾತ್ರದಾರಿ , ಶ್ರೀ ರಂಗಪಟ್ಟಣದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿದ ಟಿಪ್ಪೂ ಸುಲ್ತಾನ ಇಲ್ಲಿ ತನ್ನ ಅಂತಿಮ ಪಯಣ ಮುಗಿಸಿದ್ದ!!!!, ಆದಕಾರಣ ಈ ಸ್ಮಾರಕಗಳು ಐತಿಹಾಸಿಕ ದೃಷ್ಟಿಯಿಂದ ಪ್ರಮುಖವಾಗಿವೆ. ಟಿಪೂ ಸುಲ್ತಾನನ ದೇಹ ಸಿಕ್ಕಿದ ಜಾಗವೆಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದ್ದು ಅದರ ಚಿತ್ರಗಳು ಇಲ್ಲಿವೆ ಈ ಸಂಚಿಕೆಯಲ್ಲಿ ಎರಡು ಸ್ಮಾರಕಗಳನ್ನು ಪರಿಚಯ ಮಾಡಿದ್ದು ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ ಅಲ್ಲಿಯವರೆಗೆ ಶುಭ ಸಮಯ.

4 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲು ಸರ್..

ತುಂಬಾ ಉಪಯುಕ್ತ ಮಾಹಿತಿಗಳು..

ನಿಮ್ಮ ಇತಿಹಾಸ ಪ್ರಜ್ಞೆಗೆ.....
ಜ್ಞಾನಕ್ಕೆ...
ನಮಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....

ದಿನಕರ ಮೊಗೇರ ಹೇಳಿದರು...

thank you for the information.....sir....

ಮನಸು ಹೇಳಿದರು...

thank you sir..

vrkchs.blogspot.com ಹೇಳಿದರು...

ಟಿಪ್ಪುವಿನ ಸಮಾಧಿ ಇರುವ ಸ್ಥಳ ನಿಜವಾಗಿ ಯಾವುದು ಸರ್?