ಬುಧವಾರ, ಡಿಸೆಂಬರ್ 8, 2010

ಶ್ರೀ ರಂಗಪಟ್ಟಣದ ನಿಗೂಢ ಸ್ಮಾರಕ !! ನಮ್ಮನ್ನು ಕ್ಷಮಿಸಿಬಿಡಿ ಮಹಾರಾಣಿ!!

ಶ್ರೀ ರಂಗಪಟ್ಟಣ ದ ಪಶ್ಚಿಮವಾಹಿನಿ ರೈಲ್ವೆ ಗೇಟ್ ಹತ್ತಿರ ಕಣ್ಣಿಗೆ ಬಿದ್ದ ಈ ಸ್ಮಾರಕ ಕಣ್ಸೆಳೆಯಿತು!ಹತ್ತಿರ ಹೋದಾಗ ಇದು ಕಳಚಿದ ಇತಿಹಾಸದ ಒಂದು ಹರಿದ ಪುಟವಾಗಿ ಕಂಡಿತು.
                                                                                                                               ಇದೇನಿದು ಒಗಟು ಅಂತಿರ !ಬನ್ನಿ ಹತ್ತಿರ ಹೋಗೋಣ!ನೋಡಿ ಇಲ್ಲಿಯ ಸ್ಥಿತಿ! ಇದು ಮೈಸೂರು ಒಡೆಯರ ವಂಶದ ೧೭೭೬-೧೭೯೬ ಅವದಿಯ ಖಾಸಾ ಚಾಮರಾಜ ಒಡೆಯರ್ VIII ಅವರ ಪತ್ನಿ ಮಹಾರಾಣಿ ಕೆಂಪ ನಂಜಮ್ಮಣಿ ಅವರ ಸಮಾಧಿ ಯಾಗಿದೆ.
ಹತ್ತಿರದಲ್ಲೆ ಪೀಠ ದಲ್ಲಿ ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಶಾಸನ ಬರೆದಿದ್ದು ವಿರೂಪಗೊಂಡಿವೆ!ಈಗ ಸ್ಮಾರಕ ಇರುವ ಪರಿಸ್ಥಿತಿಯನ್ನು ಚಿತ್ರಗಳಲ್ಲಿ ಮುಂದಿಟ್ಟಿದ್ದೇನೆ.ಪ್ರಪಂಚದ ಇತಿಹಾಸ ತಿಳಿಯಲು ಹಾತೊರೆಯುವ ನಾವು ನಮ್ಮ ಇತಿಹಾಸದ ಪುಟಗಳನ್ನು ಹರಿದು ಹಾಕುತ್ತಿರುವುದು ಯಾವ ನ್ಯಾಯ?ದಯಮಾಡಿ ನಮ್ಮನ್ನು ಕ್ಷಮಿಸಿಬಿಡಿ ಮಹಾರಾಣಿ ಯವರೇ ಎಂದು ಹೇಳಿ, ಹಾಗೆ ಇತಿಹಾಸ ಹೊಸಕಿಹಾಕಿ ನಮ್ಮ ಪಾಡಿಗೆ ನಾವು ಸುಮ್ಮನಿರೋಣ ಬನ್ನಿ !ಏನಂತಿರ ನೀವು?

4 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲು ಸರ್..

ನೀವೆನ್ನುವ ಮಾತು ನಿಜ..

ಜಗತ್ತಿನ ಇತಿಹಾಸವೆಲ್ಲ ನಮಗೆ ಬೇಕು..
ನಮ್ಮ ಇತಿಹಾಸ.. ಸಂಸ್ಕೃತಿಯಬಗೆಗಿನ ಅರಿವು ನಮಗೆ ಬೇಕಿಲ್ಲ..

ನಿಮ್ಮ ಬ್ಲಾಗಿನಲ್ಲಿ ಇಂಥಹ ಇನ್ನಷ್ಟು ಮಾಹಿತಿ ಬರಲಿ..

KalavathiMadhusudan ಹೇಳಿದರು...

baalu sir namma nelada praamukhyateye namage aparichitavaagide.ee nittinalli nimma ee prayatna shlaaghaneeyavaadaddu.mattu nimma prayatna yashasviyaagali.abhinandanegalu.

KalavathiMadhusudan ಹೇಳಿದರು...

baalu sir namma nelada praamukhyateye namage aparichitavaagide.ee nittinalli nimma ee prayatna shlaaghaneeyavaadaddu.mattu nimma prayatna yashasviyaagali.abhinandanegalu.

ಸೀತಾರಾಮ. ಕೆ. / SITARAM.K ಹೇಳಿದರು...

ತಮ್ಮ ಮಾತು ನಿಜ