ಸಕ್ಕರೆ ಜಿಲ್ಲೆ ಮಂಡ್ಯದಲ್ಲಿನ ಐತಿಹಾಸಿಕ ಶ್ರೀ ರಂಗಪಟ್ಟಣ ದಲ್ಲಿರುವ ಸ್ಮಾರಕ ಲೋಕದೊಳಗೆ ಒಂದು ಸುತ್ತು.ನಿಜದ ಇತಿಹಾಸ ಕಾವೇರಿ ಹಾಗೂ ಶ್ರೀ ರಂಗನಾಥನಿಗೆ ಮಾತ್ರ ಗೊತ್ತು!!
ಗುರುವಾರ, ಜೂನ್ 14, 2012
ಶ್ರೀ ರಂಗಪಟ್ಟಣ ಯುದ್ದ ಗೆದ್ದ ಸೈನಿಕ ಅಧಿಕಾರಿಗಳಿಗೆ ಮೆಡಲ್ ಕೊಟ್ರಂತೆ.!!
ಚಿತ್ರ ಕೃಪೆ ಅಂತರ್ಜಾಲ
ಇತಿಹಾಸ ಕೆದಕಿದಷ್ಟೂ ನಾವರಿಯದ ಮಾಹಿತಿ ಎದ್ದುಬರುತ್ತದೆ. ಹುಡುಕಿದಷ್ಟೂ ನಿಘೂಡ ವಿಚಾರಗಳು ತಿಳಿದುಬರುತ್ತದೆ. ಅಂತಹ ಒಂದು ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರು ಭಾರತದಲ್ಲಿ ಹಲವಾರು ಸಾಮ್ರಾಜ್ಯಗಳನ್ನು ಗೆದ್ದಿದ್ದು ಎಲ್ಲರಿಗೂ ತಿಳಿದ ವಿಚಾರ ಆದರೆ ಗೆದ್ದ ಯಾವುದೇ ಸಾಮ್ರಾಜ್ಯದ ಹೆಸರಿನಲ್ಲಿ ಯುದ್ದ ಗೆದ್ದ ನೆನಪಿಗೆ ಆ ಸಾಮ್ರಾಜ್ಯದ ಹೆಸರಿನಲ್ಲಿ ಮೆಡಲ್ ನೀಡಿದ ಉದಾಹರಣೆ ಬಹಳ ಕಡಿಮೆ. ಆದರೆ "ಶ್ರೀ ರಂಗಪಟ್ಟಣ" ಅಥವಾ "ಸೇರಿಂಗ ಪಟ್ಟಂ" ವಿಚಾರದಲ್ಲಿ ಬ್ರಿಟೀಷರು ಅಚ್ಚರಿ ಮೂಡಿಸಿದ್ದಾರೆ. ಹೌದು 1799 ರ ಮೇ 4 ರಂದು ಶ್ರೀ ರಂಗ ಪಟ್ಟಣದ ಪ್ರವೇಶ ಪಡೆದ ಬ್ರಿಟೀಷರು ಅಂತಿಮ ಯುದ್ದ ವನ್ನು ಗೆದ್ದರು . ಅವರ ಶಕ್ತಿ ಹಾಗು ಯುಕ್ತಿಗೆ ಸವಾಲಾಗಿ ನಿಂತಿದ್ದ , ಹಾಗು ಅವರ ಯುದ್ದ ತಂತ್ರಕ್ಕೆ ಸವಾಲಾಗಿ ನಿಂತಿದ್ದ ಒಂದು ಸಣ್ಣ ದ್ವೀಪದ ಮೇಲಿನ ಯುದ್ದ ಅವರಿಗೆ ಗೆಲುವಿನ ಗರಿ ಮೂಡಿಸಿತ್ತು. ಯುದ್ದದ ವಿಚಾರದಲ್ಲಿ ಅತ್ಯಂತ ಹೆದರಿಕೆ, ಗೌರವ ಮೂಡಿಸಿದ್ದ ಈ "ಶ್ರೀ ರಂಗ ಪಟ್ಟಣ ಅಥವಾ ಸೇರಿಂಗ ಪಟ್ಟಂ " ಯುದ್ದ ಗೆದ್ದ ನೆನಪಿಗಾಗಿ ಯುದ್ಧ ದಲ್ಲಿ ಪಾಲ್ಗೊಂಡಿದ್ದ ತನ್ನ ಅಧಿಕಾರಿಗಳು, ಸೈನಿಕರಿಗೆ 1801 ರಲ್ಲಿ ಸನ್ಮಾನ ಮಾಡಿ ಸುಮಾರು 50000 ಕ್ಕೂ ಹೆಚ್ಚು "ಸೇರಿಂಗ ಪಟ್ಟಂ ಮೆಡಲ್ " ನೀಡಿ ಗೌರವಿಸಿದೆ.http://en.wikipedia.org/wiki/Seringapatam_medal ಲಿಂಕ್ ನಲ್ಲಿ ಈ ಬಗ್ಗೆ ಮಾಹಿತಿ ಇದೆ ನೋಡಿ.ವಿಕಿ ಪೀಡಿಯಾ ಮಾಹಿತಿಯಂತೆ 350 ಚಿನ್ನ,1035 ಬೆಳ್ಳಿ, 5000 ಕಂಚು ಹಾಗು 45000 ಟಿನ್ ಮೆಡಲ್ಗಳನ್ನು ನೀಡಿರುವುದಾಗಿ ತಿಳಿಸಲಾಗಿದೆ. ಚಿತ್ರ ಕೃಪೆ http://www.fitzmuseum.cam.ac.uk/coins/collection/watson/page327.html ಹಾಗು ವಿಕಿಪೀಡಿಯ ಸೇರಿಂಗ ಪಟಂ ಮೆಡಲಿನ ಒಂದು ಬದಿಯಲ್ಲಿ ಮೈಸೂರಿನ ಹುಲಿಯ ಮೇಲೆ ಬ್ರಿಟೀಶ್ ಸಿಂಹ ಒಂದು ಎರಗಿರುವ ಚಿನ್ಹೆ ಇದ್ದು, ಮತ್ತೊಂದು ಬದಿಯಲ್ಲಿ ಬ್ರಿಟೀಶ್ ಸೈನಿಕರು ಶ್ರೀ ರಂಗ ಪಟ್ಟಣದ ಕೋಟೆಯನ್ನು ಆಕ್ರಮಿಸುತ್ತಿರುವ ಚಿತ್ರಣ ಇದೆ. ಕನ್ನಡ ನಾಡಿನ ಒಂದು ಸಣ್ಣ ದ್ವೀಪ ಬ್ರಿಟೀಷರಿಗೆ ನಡುಕ ಹುಟ್ಟಿಸಿ , ತನ್ನ ಹೆಸರಿನಲ್ಲಿ ವೈರಿಗಳಿಂದ "ಮೆಡಲ್ ಚಾಪಿಸಿಕೊಂಡ " ಒಂದು ಅದ್ಭತ ಊರು ಇದು. ಬಹುಷಃ ಇಂತಹ ಘಟನೆ ಭಾರತದ ಯಾವ ಊರಿಗೂ ನಡೆದಿಲ್ಲ.ಭಾರತದ ಮಹಾನ್ ಊರುಗಳಾದ ದೆಹಲಿ, ಮುಂಬೈ, ಚೆನ್ನೈ . ಕಲ್ಕತ್ತಾ ಯಾವ ಊರಿಗೂ ಇಂತಹ ಮೆಡಲ್ ಚಾಪಿಸಿಕೊಂಡ ಇತಿಹಾಸ ಇಲ್ಲಾ ಅದೇ ನಮ್ಮ ಈ ಊರಿನ ವಿಶೇಷ.
ಸೊಗಸಾದ ಮಾಹಿತಿ..ಸವಿವರವನ್ನು ಸೊಗಸಾಗಿ ದಾಖಲೆ ಸಹಿತ ಕೊಟ್ಟಿದ್ದೀರ.. ನಿಮ್ಮ ಶ್ರಮಕ್ಕೆ ಅಭಿನಂದನೆಗಳು ವೀರರು ಧೀರರು ಹುಟ್ಟಿದ ನಾಡು ನಮ್ಮದು.. ಇದನ್ನು ಎದೆ ತಟ್ಟಿ ಹೇಳಲು ಸಾಕಷ್ಟು ನಿದರ್ಶನಗಳು ಸಿಗುತ್ತವೆ.. ನಿಮ್ಮ ಬರಹವನ್ನು ಎದೆ ತಟ್ಟಿ, ಮುಟ್ಟಿ ಹೇಳಿಕೊಳ್ಳುತ್ತೇನೆ ನಾನೊಬ್ಬ ಹೆಮ್ಮೆಯ ಈ ನಾಡಿನ ಪುತ್ರನೆಂದು..
ಶ್ರೀರಂಗ ಪಟ್ಟಣ ಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದೇನೆ ..ನಿಮ್ಮ ಮಾಹಿತಿಯೊಂದಿಗೆ ಮತ್ತೊಮ್ಮೆ ಶ್ರೀರಂಗಪಟ್ಟಣ ನೋಡುವ ಆಸೆಯಾಗಿದೆ .ಅಚ್ಚರಿ ,ಹಾಗೂ ಹೆಮ್ಮೆ ಎನಿಸಿತು . ಸಚಿತ್ರ ಲೇಖನ ವಿವರವಾಗಿ ಮಾಹಿತಿಗಳನ್ನು ಕೊಟ್ಟಿದ್ದೀರಿ . ಹೃತ್ಪೂರ್ವಕ ಅಭಿನಂದನೆಗಳು .
7 ಕಾಮೆಂಟ್ಗಳು:
ಸೊಗಸಾದ ಮಾಹಿತಿ..ಸವಿವರವನ್ನು ಸೊಗಸಾಗಿ ದಾಖಲೆ ಸಹಿತ ಕೊಟ್ಟಿದ್ದೀರ..
ನಿಮ್ಮ ಶ್ರಮಕ್ಕೆ ಅಭಿನಂದನೆಗಳು
ವೀರರು ಧೀರರು ಹುಟ್ಟಿದ ನಾಡು ನಮ್ಮದು..
ಇದನ್ನು ಎದೆ ತಟ್ಟಿ ಹೇಳಲು ಸಾಕಷ್ಟು ನಿದರ್ಶನಗಳು ಸಿಗುತ್ತವೆ..
ನಿಮ್ಮ ಬರಹವನ್ನು ಎದೆ ತಟ್ಟಿ, ಮುಟ್ಟಿ ಹೇಳಿಕೊಳ್ಳುತ್ತೇನೆ ನಾನೊಬ್ಬ ಹೆಮ್ಮೆಯ ಈ ನಾಡಿನ ಪುತ್ರನೆಂದು..
ಬಾಲಣ್ಣ..
ಇತಿಹಾಸದ ಕುರಿತು ನಿಮ್ಮ ಆಸಕ್ತಿ ನೋಡಿ ಬೆರಗಾಗಿದ್ದೇನೆ...
ಕುತೂಹಲಪೂರ್ಣ ಮಾಹಿತಿ ಇದು..
ನಿಮ್ಮ ಈ ಬ್ಲಾಗ್ ಲೇಖನಗಳನ್ನು ಒಂದು ಪುಸ್ತಕ ಮಾಡಿ..
ಆಸಕ್ತಿ ಪ್ರಿಯರಿಗೆ ಇದು ಸಂಗ್ರಹ ಯೋಗ್ಯ..
ಜೈ ಹೋ ಬಾಲಣ್ಣ...
ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು. ಪ್ರಕಾಶಣ್ಣ ಹೇಳಿದ ಹಾಗೆ ಒಂದು ಪುಸ್ತಕ ಮಾಡಿ.
ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು.
ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು.
ಸಾರ್,
ಶ್ರೀರಂಗಪಟ್ಟಣ ಹಲವು ಆಕ್ರಮಣಕಾರರಿಗೆ ಎಂದಿಗೂ ಅಬೇಧ್ಯ ಕೋಟೆಯಾಗಿತ್ತು ಎಂಬುದನ್ನು ಇತಿಹಾಸ ಸಾರಿ ಸಾರಿ ಹೇಳಿದೆ.
ಅಂತಹ ಯುದ್ಧವನ್ನು ಗೆದ್ದರೆ ಬ್ರಿಟೀಷರು ಸಂಪೂರ್ಣ ಭಾರತವನ್ನೆ ಗೆದ್ದಂತೆ. ಅದಕ್ಕೆ ಇಷ್ಟು ಮೆಡಲುಗಳು, ಬಹುಮಾನಗಳು.
ಒಂದು ಊರಿನ ಬಗ್ಗೆ ಇತಿಹಾಸ ತಜ್ಞರಾದ ನೀವು ಕೆದಕಿ ಕೆದಕಿ ಹೊರತರುತ್ತಿರುವ ಮಾಹಿತಿಗಳು , ಅದರ ಹಿಂದಿರುವ ನಿಮ್ಮ ಅಕ್ಕರೆ ಮತ್ತು ಶ್ರಮ ಪ್ರಶಂಸನೀಯ.
ಶ್ರೀರಂಗ ಪಟ್ಟಣ ಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದೇನೆ ..ನಿಮ್ಮ ಮಾಹಿತಿಯೊಂದಿಗೆ ಮತ್ತೊಮ್ಮೆ ಶ್ರೀರಂಗಪಟ್ಟಣ ನೋಡುವ ಆಸೆಯಾಗಿದೆ .ಅಚ್ಚರಿ ,ಹಾಗೂ ಹೆಮ್ಮೆ ಎನಿಸಿತು . ಸಚಿತ್ರ ಲೇಖನ ವಿವರವಾಗಿ ಮಾಹಿತಿಗಳನ್ನು ಕೊಟ್ಟಿದ್ದೀರಿ .
ಹೃತ್ಪೂರ್ವಕ ಅಭಿನಂದನೆಗಳು .
ಕಾಮೆಂಟ್ ಪೋಸ್ಟ್ ಮಾಡಿ